ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ

777

ಸುಳ್ಯ: ಇಂದು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನದ ಆಚರಣೆಯ ಅಂಗವಾಗಿ ಸುಳ್ಯದ ಕಾಯಾರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಹೆಸರಿನಲ್ಲಿ ವಿಶೇಷ ಪೂಜೆಯನ್ನು ಪಕ್ಷದ ವತಿಯಿಂದ ನೆರೆವೇರಿಸಲಾಯಿತು.ಈ ಸಂದರ್ಭದಲ್ಲಿ ಕಾಯಾರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಕ್ತೇಸರಾದ ಪಿ.ಕೆ.ಉಮೇಶ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ,ಕಾಯರ್ತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ನೀಲಕಂಠ ವಿಶೇಷ ಪೂಜೆ ನೆರೆವೇರಿಸಿದರು. ವಿಜಯ ದೇಗೊಂಡಿ ಅಧ್ಯಕ್ಷ ಬಿಜೆಪಿ ವಾರ್ಡು ಕಾಯರ್ತೋಡಿ, ಬಿಜೆಪಿ ವಾರ್ಡ್ ಸಮಿತಿಯ ಕಾರ್ಯದರ್ಶಿ ದೀಪಕ್ , ಸಿ .ಎ. ಬ್ಯಾಂಕ್ ನ ನಿರ್ದೇಶರಾದ ನವೀನ್ ಕುದ್ಪಾಜೆ, ಕಾಯರ್ತೋಡಿ ಮಹಾವಿಷ್ಟು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರಾಯಣ ಕಾಯರ್ತೋಡಿ, ಚಂದ್ರಶೇಖರ್ ಅಡ್ಪಾಂಗಯ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಚಿದಾನಂದ ಕಾಯರ್ತೋಡಿ, ಸುಳ್ಯ ಬಿಜೆಪಿ ಮಂಡಲ ಸೋಷಿಯಲ್ ಮೀಡಿಯಾ ಇದರ ಸಹ ಸಂಚಾಲಕರಾದ ಸುಪ್ರೀತ್ ಮೋಂಟಡ್ಕ, ಮಿಥುನ್ ಕಾಯರ್ತೋಡಿ, ಹಿಂದೂ ಜಾಗರಣ ವೇದಿಕೆಯ ಉಪಾಧ್ಯಕ್ಷ ಪ್ರಶಾಂತ್ ಕಾಯರ್ತೋಡಿ, ದೇವಿಪ್ರಸಾದ್ ಕುದ್ಪಾಜೆ, ಕಾಯರ್ತೋಡಿ ದೇವಸ್ಥಾನ ಇದರ ಗುಮಸ್ಥರು ಸೇರಿದಂತೆ ಗಣ್ಯರು ಹಾಜರಿದ್ದರು.

See also  ಮಡಿಕೇರಿ:ಎಂಡಿಎಂಎ ಮಾರಾಟ ಮಾಡಲು ಯತ್ನ; ಆರೋಪಿ ಪೊಲೀಸ್ ಬಲೆಗೆ
  Ad Widget   Ad Widget   Ad Widget   Ad Widget   Ad Widget