ಕ್ರೈಂ

ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಸುಳ್ಯದ ಖತರ್ನಾಕ್ ಕಳ್ಳ, ಈಗ ಪೊಲೀಸರ ಅತಿಥಿ

553

ಸುಳ್ಯ: ರೈಲು ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಸುಳ್ಯದ ಖತರ್ನಾಕ್ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮಂಗಳೂರು – ಬೆಂಗಳೂರು ರೈಲಿನಲ್ಲಿ ಸಂಚರಿಸುತ್ತಿರುವ ಯಾತ್ರಿಕರ ಮೊಬೈಲ್ ಫೋನ್, ಲೇಡೀಸ್ ಬ್ಯಾಗ್ ಕಳವುಗೈಯುತ್ತಿದ್ದ ಆರೋಪಿ ಸುಳ್ಯದ ಯುವಕನನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಂಗಳೂರು – ಬೆಂಗಳೂರು ಸಂಚರಿಸುವ ರೈಲಿನಿಂದ ಸುಳ್ಯದ ಕಲ್ಲುಮುಟ್ಲು ನಿವಾಸಿ 19 ವರ್ಷದ ಯುವಕ ಅಬ್ದುಲ್ ಅಜೀಜ್ ಎಂಬುವವನು ಮಂಗಳೂರು ರೈಲ್ವೆ ಪೊಲೀಸರು ಬಂದಿಸಿರುವುದಾಗಿ ತಿಳಿದುಬಂದಿದೆ.

ಪ್ರಯಾಣಿಕರು ನಿದ್ರೆಯಲ್ಲಿರುವ ಸಂದರ್ಭದಲ್ಲಿ ಕಳವುಗೈಯುತ್ತಿದ್ದ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಆರೋಪಿಯಿಂದ ಸುಮಾರು 11 ಮೊಬೈಲ್ ಫೋನ್, ಒಂದು ಟ್ಯಾಬ್‌, ಒಂದು ವ್ಯಾನಿಟಿ ಬ್ಯಾಗ್, ಪಾಸ್ ಪೋರ್ಟ್ ದಾಖಲೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

See also  ಬಂಟ್ವಾಳ: ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕೊಡಗಿನ ವ್ಯಕ್ತಿ ಮೇಲೆ ಹಲ್ಲೆ..! ರಾತ್ರಿ ಹಣ - ಚಿನ್ನ ದೋಚಿ ಪರಾರಿ..!
  Ad Widget   Ad Widget   Ad Widget   Ad Widget   Ad Widget