ಕ್ರೈಂ

ಪಾಣತ್ತೂರಿನಲ್ಲಿ ಮರ ಸಾಗಾಟ ಲಾರಿ ಪಲ್ಟಿ, 4 ಮಂದಿ ದುರ್ಮರಣ

ಪಾಣತ್ತೂರು: ಸುಳ್ಯ-ಪಾಣತ್ತೂರು ಅಂತಾ ರಾಜ್ಯ ರಸ್ತೆಯ ಪರಿಯಾರಂ ಎಂಬಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮರಗಳನ್ನು ತುಂಬಿಸಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. ವರ್ಷದ ಆರಂಭದಲ್ಲಿ ಬಸ್ ಮಗುಚಿ ಅದೇ ಸ್ಥಳದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

ದುರ್ಘಟನೆಯಲ್ಲಿ ಲಾರಿಯಲ್ಲಿದ್ದ 4 ಮಂದಿ ಮೃತಪಟ್ಟಿದ್ದು ಮೃತಪಟ್ಟವರನ್ನು ಪಾಣತ್ತೂರು ಸಮೀಪದ ಕುಂಡುಪಳ್ಳಿಯವರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದವರ ಪೈಕಿ 5 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಮರ ತುಂಬಿದ ಲಾರಿ ಕಲ್ಲಪಳ್ಳಿಯಿಂದ ಪಾಣತ್ತೂರು ಕಡೆಗೆ ತೆರಳುತ್ತಿತ್ತು. ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

Related posts

ಮಂಗಳೂರು: ಬಾಡಿಗೆ ಮನೆಯಿಂದ ಚಿನ್ನಾಭರಣ ಕಳವು! ಮಹಿಳೆ ರಾತ್ರಿ ಬಂದಾಗ ಹಾಕಿದ ಬೀಗ ಹಾಕಿಯೇ ಇತ್ತು! ಏನಿದು ನಿಗೂಢ ಘಟನೆ?

ನವರಾತ್ರಿ ಗರ್ಬಾ ಆಚರಣೆ ವೇಳೆ ಮಹಾ ದುರಂತ..! 24 ಗಂಟೆಗಳಲ್ಲಿ 10 ಮಂದಿ ಕೊನೆಯುಸಿರೆಳೆದದ್ದು ಹೇಗೆ? ಏನಿದು ವಿಚಿತ್ರ ಘಟನೆ?

ಆಸ್ಪತ್ರೆಗೆ ಬಾಂಬ್​ ಬೆದರಿಕೆ..! ರೋಗಿಗಳನ್ನು ಹೊರಗೆ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ..!