Latestಉಡುಪಿಉಡುಪಿಕರಾವಳಿಕ್ರೈಂದಕ್ಷಿಣ ಕನ್ನಡದೇಶ-ವಿದೇಶಮಂಗಳೂರುರಾಜ್ಯ

ಪಹಲ್ಗಾಮ್ ದಾಳಿ: ಕರ್ನಾಟಕದ ಕರಾವಳಿ ಸಮುದ್ರ ಮಾರ್ಗಗಳಲ್ಲಿ ಉಗ್ರರು ನುಸುಳುವ ಶಂಕೆ..! ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ..!

343

ನ್ಯೂಸ್ ನಾಟೌಟ್: ಪಹಲ್ಗಾಮ್ ​​ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಂತರ ಕರ್ನಾಟಕ ಕರಾವಳಿಯಲ್ಲಿ ಕರಾವಳಿ ಕಾವಲು ಪೊಲೀಸರ ಕಟ್ಟೆಚ್ಚರ ಹೆಚ್ಚಾಗಿದೆ. ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆಯ ಅನುಮಾನದ ಶಂಕೆ ಇದ್ದು, ಕರಾವಳಿ ಕಾವಲು ಪೊಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ.

ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್ ​​ಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಉಡುಪಿ ಕರಾವಳಿ ಪೊಲೀಸ್ ಎಸ್. ಪಿ ಮಿಥುನ್ ಸೂಚನೆಯ ನಂತರ ಪೊಲೀಸರು ತಪಾಸಣೆ ಹೆಚ್ಚಿಸಿದ್ದಾರೆ.

ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿ ಪೊಲೀಸರಿಂದ ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ ಆರಂಭಿಸಲಾಗಿದೆ. ಮಂಗಳೂರು ಸಮುದ್ರ ಮಾರ್ಗಗಳ ಕರಾವಳಿ ಪ್ರದೇಶಗಳಲ್ಲೂ ಶಸ್ತ್ರ ಸನ್ನದ್ಧರಾಗಿ ಕರಾವಳಿ ಕಾವಲು ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.  

ಟೈರ್‌ ಸ್ಫೋಟಗೊಂಡು ಡಿವೈಡರ್‌ ಗೆ ಗುದ್ದಿದ ಇನ್ನೋವಾ ಕಾರು..! ಪೊಲೀಸ್‌ ಸೇರಿ ಮೂವರು ಸಾವು..!

ಅನ್ನಭಾಗ್ಯದ ಅಕ್ಕಿ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ..! ಕಾಳಸಂತೆಗೆ ಹೋಗುತ್ತಿದ್ದ 40 ಟನ್ ಅಕ್ಕಿ ಜಪ್ತಿ..!

See also  ಮಂಗಳೂರು:ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಯುವಕರಿಂದ ನೈತಿಕ ಪೊಲೀಸ್ ಗಿರಿ,ಓರ್ವ ಅರೆಸ್ಟ್
  Ad Widget   Ad Widget   Ad Widget   Ad Widget