Latestಕ್ರೈಂದೇಶ-ವಿದೇಶ

ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು ಎಂದ ಉಗ್ರನ ತಾಯಿ..! ಭಯೋತ್ಪಾದಕರ ಮನೆಗಳು ನೆಲಸಮ, ಸಂಬಂಧಿಕರು ವಶಕ್ಕೆ..!

1.1k

ನ್ಯೂಸ್ ನಾಟೌಟ್: ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು ಎಂದು ಪುತ್ರ ಉಗ್ರನಿಗೆ ಆತನ ತಾಯಿ ಮನವಿ ಮಾಡಿಕೊಂಡಿದ್ದಾರೆ.
ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಹಲವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಭಯೋತ್ಪಾದಕರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಉಗ್ರ ಆದಿಲ್‌ ಹುಸೇನ್‌ ಥೋಕರ್‌ ಮನೆ ಕೂಡ ಧ್ವಂಸ ಮಾಡಲಾಗಿದೆ.

ಭದ್ರತಾ ಪಡೆಗಳು ಸ್ಫೋಟಕ ಬಳಸಿ ಮನೆ ಧ್ವಂಸ ಮಾಡಿವೆ. ಹಿಂದೊಮ್ಮೆ ಉಗ್ರ ಆದಿಲ್‌ ಊಟ ಮಾಡಲು ಬಂದಿದ್ದ ಸ್ಥಳವನ್ನು ಆತ ತಾಯಿ ಶಹಜಾದಾ ಬಾನೊ, ಭದ್ರತಾ ಪಡೆ ಸಿಬ್ಬಂದಿಗೆ ತೋರಿಸಿದ್ದಾರೆ.

ಸೈನಿಕರು ಅನಂತನಾಗ್ ಜಿಲ್ಲೆಯಲ್ಲಿನ ಕುಟುಂಬದ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಬಾನೊ ಅವರನ್ನು ಪಕ್ಕದ ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಶಿಫ್ಟ್‌ ಮಾಡಿದ್ದಾರೆ. ಆದಿಲ್ ಮಂಗಳವಾರ ಪಹಲ್ಗಾಮ್‌ ನಲ್ಲಿ ನಡೆದ ದಾಳಿಯ ಪ್ರಮುಖ ಶಂಕಿತರಲ್ಲಿ ಒಬ್ಬನಾಗಿದ್ದಾನೆ. 2018 ರಿಂದ ಅವನೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಆತನ ಕುಟುಂಬ ಹೇಳಿಕೊಂಡಿದೆ.

ನನ್ನ ಮಗ ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಭಾಗಿಯಾಗಿದ್ದರೆ, ಅವನಿಗೆ ಸೈನಿಕರು ತಕ್ಕ ಶಿಕ್ಷೆ ಕೊಡಲಿ ಎಂದು ಆದಿಲ್‌ ನ ತಾಯಿ ಶಹಜಾದಾ ಬಾನೊ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಪುತ್ರನಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ‘ನಾವು ನೆಮ್ಮದಿಯಿಂದ ಬದುಕಬೇಕು. ನೀನು ಬಂದು ಶರಣಾಗು’ ಎಂದು ಪುತ್ರನಿಗೆ ಕೇಳಿಕೊಂಡಿದ್ದಾರೆ.

ಆದಿಲ್ ತಂದೆ ವಲೀಮ್, ಸಹೋದರರಾದ ಜಹೀರ್ ಮತ್ತು ಅರ್ಶ್ಲಾಮ್ ಮತ್ತು ಸೋದರ ಸಂಬಂಧಿಗಳಾದ ಜುಲಂಕರ್ ಮತ್ತು ಸಜ್ಜದ್ ಎಲ್ಲರೂ ಬಂಧನದಲ್ಲಿದ್ದಾರೆ. ಅವರ ತಾಯಿಯನ್ನು ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆಯಲಾಗಿತ್ತು ಮತ್ತೆ ಬಿಡುಗಡೆ ಮಾಡಲಾಗಿದೆ.  

27 ವರ್ಷದ ವ್ಯಕ್ತಿಯಿಂದ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ..! ನಿರ್ಮಾಣ ಹಂತದ ಕಟ್ಟಡದಲ್ಲಿ ಆಕೆಯ ಮೃತದೇಹ ಪತ್ತೆ..!

ಜಮೀನಿಗಾಗಿ ಟ್ರ್ಯಾಕ್ಟರ್ ಹತ್ತಿಸಿ ಹೆತ್ತವರನ್ನೇ ಬರ್ಬರವಾಗಿ ಕೊಂದ ಮಗ..! ಆರೋಪಿಗಾಗಿ ಪೊಲೀಸರ ಹುಡುಕಾಟ..!

See also  ಯದುವೀರ್ 2ನೇ ಪುತ್ರನಿಗೆ ನಾಮಕರಣ:ಮೈಸೂರು ಎರಡನೇ ಯುವರಾಜನ ಹೆಸರೇನು?
  Ad Widget   Ad Widget   Ad Widget   Ad Widget