ಕ್ರೈಂ

ವಿವಾಹಿತ ವಕೀಲೆಗೆ ಮದುವೆ ಆಗು ಅಂತ ಬೆನ್ನು ಬಿದ್ದ ಪುಣ್ಯಾತ್ಮ..!

ಬೆಂಗಳೂರು: ವಿವಾಹಿತ ವಕೀಲೆಯೊಬ್ಬರಿಗೆ ಮದುವೆಯಾಗು ಅಂತ ಪ್ರಾಣ ತಿನ್ನುತ್ತಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019 ರಲ್ಲಿ ಫಿಲ್ ಅಂಡ್ ಚಿಲ್ ರೆಸ್ಟೋರೆಂಟ್ ಗೆ ವಕೀಲೆ ಭೇಟಿ ನೀಡಿದ ವೇಳೆ ಪ್ರವೀಣ್ ಕರಮಡ್ಡಿ ಎಂಬಾತ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಕೇಸ್ ನಲ್ಲಿ ಸಲಹೆ ಬೇಕೆಂದು ವಕೀಲೆಯ ನಂಬರ್ ಪಡೆದ ಆತ ಮಧ್ಯರಾತ್ರಿಯಲ್ಲಿ ವಕೀಲೆಗೆ ಕರೆ ಮಾಡುತ್ತಿದ್ದ. ತನ್ನನ್ನು ಮದುವೆಯಾಗು ನಿನ್ನ ಗಂಡನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲ ಹೇಳುತ್ತಿದ್ದ. ಒಪ್ಪದಿದ್ದರೆ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದ. ಇದರಿಂದ ನೊಂದು ಇದೀಗ ವಕೀಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Related posts

ಉಪ್ಪಿನಂಗಡಿಯಿಂದ ನಾಪತ್ತೆಯಾದವನಿಗೆ ಭಯೋತ್ಪಾದನೆಯ ನಂಟು, ಸ್ಫೋಟಕ್ಕೆ ಸಂಚು ರೂಪಿಸಿದ್ದವರಲ್ಲಿ ಈತನೂ ಒಬ್ಬ..!

ಉಪ್ಪಿನಂಗಡಿ: ಊಟ ಮಾಡುತ್ತಿದ್ದ ಮಹಿಳೆ ಮೇಲೆ ಕೈ ಹಾಕಿದ ದುಷ್ಕರ್ಮಿ

ಕೊಡಗು: ಬ್ಯಾಂಕ್ ವ್ಯವಸ್ಥಾಪಕ ಬ್ಯಾಂಕ್‌ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..! ಪತ್ನಿಯೂ ಬ್ಯಾಂಕ್ ವ್ಯವಸ್ಥಾಪಕಿ..!