ಕರಾವಳಿ

ಮದ್ಯ ಸೇವಿಸಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪ್ರವೇಶಿಸಿದ್ದ ವ್ಯಕ್ತಿ, ಸೊಂಡಿಲಿನಿಂದ ಎತ್ತಿ ಎಸೆದ ದೇವರ ಆನೆ..!

584

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ ಮದ್ಯ ಸೇವಿಸಿದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಘಟನೆ ನಡೆದಿದೆ. ಈ ಘಟನೆ ಎರಡು ವಾರಗಳ ಹಿಂದೆಯೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ಏನಿದು ಘಟನೆ?

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ರಾತ್ರಿಯ ಪೂಜೆಗೆಂದು ವ್ಯಕ್ತಿಯೊಬ್ಬರು ಬಂದಿದ್ದರು.  ಅವರು ‘ಯಶಸ್ವಿನಿ’ ಎಂಬ ಆನೆಯ ಸಮೀಪದಲ್ಲಿ ಹಾದು ಹೋಗುತ್ತಿದ್ದಂತೆ ಹಠಾತ್ತನೆ ಸೊಂಡಿಲಿನಿಂದ ಆನೆ ವ್ಯಕ್ತಿಯನ್ನು ಹಿಡಿದುಕೊಂಡು ಎತ್ತಿ ಎಸೆದಿದೆ. ಈ ಘಟನೆಯನ್ನು ಆನೆಯ ಮಾವುತ ಕೂಡ ದೃಢಪಡ್ಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಆನೆಯು ವ್ಯಕ್ತಿಯನ್ನು  ಎತ್ತಿ ಹಿಂದಕ್ಕೆ ಮೆಲ್ಲಗೆ ಎಸೆದಿರುವುದರಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಎಸೆಯಲ್ಪಟ್ಟ ವ್ಯಕ್ತಿ ‌ಮದ್ಯ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದರಿಂದ ಆನೆ ಕೋಪಗೊಂಡು ಹೀಗೆ ಮಾಡಿದೆ ಎನ್ನಲಾಗಿದೆ.

See also  ಸುಳ್ಯ:ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ನಿಧನ,ಕಣ್ಣೀರಲ್ಲಿ ಕುಟುಂಬ..
  Ad Widget   Ad Widget   Ad Widget   Ad Widget   Ad Widget