ಕರಾವಳಿ

ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿ ಕೆಲವೇ ನಿಮಿಷದಲ್ಲಿ ಕಳೆದು ಹೋಗಿದ್ದ 24 ಗ್ರಾಂ ಚಿನ್ನದ ಸರ ಪ್ರತ್ಯಕ್ಷ..!

495

ಉಪ್ಪಿನಂಗಡಿ: ತುಳುನಾಡಿನ ದೈವಗಳು ಪವರ್ ಫುಲ್ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೈವಗಳು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಅನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆಯ ಕಥೆ ಇಲ್ಲಿದೆ. ಮಹಿಳೆಯೊಬ್ಬರು ತನ್ನ ಮಗಳ ಮನೆಗೆ ಹೋಗುತ್ತಿರುವ ದಾರಿಯಲ್ಲಿ ಕಳೆದುಕೊಂಡಿದ್ದ 24 ಗ್ರಾಂನ ಚಿನ್ನದ ಸರವೊಂದು ದೈವ ದೇವರಿಗೆ ಹರಕೆ ಹೊತ್ತ ಕೂಡಲೇ ಲಭಿಸಿದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಇಂದಿರಾ ದೇವಾಡಿಗ ಸುಳ್ಯಪದವಿನಲ್ಲಿರುವ ಮಗಳ ಮನೆಗೆ ಹೋಗುವಾಗ ಸರವನ್ನು ಕಳೆದುಕೊಂಡಿದ್ದರು. ಸುಳ್ಯ ಪದವಿಗೆ ತಲುಪಿದಾಗ ಈ ವಿಚಾರ ಅರಿವಿಗೆ ಬಂದಿದೆ. ರಿಕ್ಷಾ ಚಾಲಕ ರಮೇಶ್ ಅವರಿಗೆ ವಿಷಯ ತಿಳಿಸಿ ಮೊಬೈಲ್ ಸಂಖ್ಯೆ ನೀಡಿ ಮಗಳ ಮನೆಗೆ ಹೋದರು. ದಾರಿಯಲ್ಲೆಲ್ಲೋ ಬಿದ್ದಿರುವ ಹಿನ್ನೆಲೆಯಲ್ಲಿ ಹುಡುಕುವ ಪ್ರಯತ್ನ ಅಸಾಧ್ಯವೆಂದುಕೊಂಡು ವಾಪಸ್ ಉಪ್ಪಿನಂಗಡಿಗೆ ಬಂದ ಅವರು ಕೊರಗಜ್ಜನಿಗೆ ಹಾಗೂ ಮಹಾಕಾಳಿ ದೇವರಿಗೆ ಹರಕೆ ಸಂಕಲ್ಪಿಸಿ ಚಿನ್ನದ ಸರ ದೊರಕಿಸುವಂತೆ ಪ್ರಾರ್ಥಿಸಿದರು. ಅಚ್ಚರಿಯ ಘಟನೆಯೆಂದರೆ ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ ಪುತ್ತೂರಿನಿಂದ ಬಂದ ಫೋನ್ ಕರೆಯೊಂದು ಕಳೆದುಹೋದ ಚಿನ್ನಾಭರಣ ಪುತ್ತೂರಿನಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಸ್ವತಃ ಇಂದಿರಾ ದೇವಾಡಿಗ ಅವರಿಗೆ ಅಚ್ಚರಿಯೋ ಅಚ್ಚರಿ. ನಂಬಿದ ದೇವರು ಎಂದೂ ಕೈ ಬಿಡಲಾರ ಅನ್ನುವುದು ಸತ್ಯ ಎಂದು ಇಂದಿರಾ ಪ್ರತಿಕ್ರಿಯಿಸಿದ್ದಾರೆ.

See also  ಸುಳ್ಯ: ರಾಮಮಂದಿರ ಬ್ಯಾನರ್ ಹರಿದ ಪ್ರಕರಣ, SPಗೆ ಕರೆ ಮಾಡಿ ಕಠಿಣ ಕ್ರಮಕ್ಕೆ ಸಂಸದ ನಳಿನ್ ಕುಮಾರ್ ಒತ್ತಾಯ
  Ad Widget   Ad Widget   Ad Widget   Ad Widget