ಮಂಗಳೂರು: ಕೊರಗಜ್ಜನ ಕ್ಷೇತ್ರ ಸಹಿತ ಹಲವು ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದ ಆರೋಪಿ ಬಂಧನ ವಿಚಾರವಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ದೈವ ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮೆರೆದ ಆರೋಪಿಯ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ.
ದೇವದಾಸ್ ದೇಸಾಯಿಗೆ ಮಾಡೂರು ಬಜರಂಗದಳ ಶಾಖೆಯವರು ಶ್ರದ್ಧಾಂಜಲಿ ಬ್ಯಾನರ್ ಹಾಕಿದ್ದಾರೆ. ಮಂಗಳೂರು ಹೊರವಲಯದ ಬೀರಿ ಜಂಕ್ಷನ್ನಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್ ಬಂಧನವಾಗಿತ್ತು.