ಕಣ್ಣೂರು : ಕೇರಳದ ಕೋತಮಂಗಲಂ ಬಳಿಯ ನೆಲ್ಲಿಕುಜಿ ಎಂಬಲ್ಲಿ ಯುವಕನೋರ್ವ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡು ಹಾರಿಸಿ ತಾನು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ರಾಖಿಲ್ (24)ಎಂಬ ಯುವಕ ಬಿಡಿಎಸ್ ವಿದ್ಯಾರ್ಥಿನಿ ಮಾನಸ ಪಿ.ವಿ ಎಂಬಾಕೆಗೆ ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಬಳಿಕ ತಾನು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಕೋತಮಂಗಲಂ ಇಂದಿರಾಗಾಂಧಿ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದು ಬಂದಿದೆ. ಮಾನಸನ ಮನೆಯವರು ಕೆಲವು ಸಮಯದ ಹಿಂದೆ ರಾಖಿಲ್ ತಮ್ಮ ಮಗಳನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಕಿರುಕುಳ ಕೊಡುತ್ತಿದ್ದಾನೆ ಎಂದು ಕಣ್ಣೂರು ಪೊಲೀಸರಿಗೆ ದೂರು ನೀಡಿದ್ದರು. ಯುವಕ ಯುವತಿ ಇಬ್ಬರು ಒಂದೇ ಊರಿನವರಾಗಿದ್ದು ಪ್ರೀತಿ ನಿರಾಕರಣೆ ಕಾರಣದಿಂದ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.