ಕ್ರೈಂ

ಮದುವೆಗೆ ಒಪ್ಪದ ಪ್ರಿಯಕರನ ಮೇಲೆ ಆಸಿಡ್ ಎರಚಿದ ಯುವತಿ..!

637

ತಿರುವನಂತಪುರ: ಮದುವೆ ಅಥವಾ ಪ್ರೀತಿಸಲು ಒಪ್ಪದ ಯುವತಿಯರ ಮೇಲೆ ಆಸಿಡ್ ಎರಚಿರುವ ಘಟನೆ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಮದುವೆಗೆ ಒಪ್ಪದ ಪ್ರಿಯಕರ ಮೇಲೆಯೇ ಆಸಿಡ್ ಎರಚಿದ ಘಟನೆ ಬೆಳಕಿಗೆ ಬಂದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಅರುಣ್ ಕುಮಾರ್ (27) ತಿರುವನಂತಪುರಂ ಜಿಲ್ಲೆಯ ಪೂಜಾಪ್ಪುರ ಮೂಲದವರು.

ಏನಿದು ಘಟನೆ?

ಆರೋಪಿ ಶೀಬಾಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದ ಆತ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಆದರೆ, ಅರುಣ್ ಬೇರೆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದು ಶೀಬಾಳ ಕೋಪಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 16 ರಂದು ಆದಿಮಲಿ ಸಮೀಪದ ಇರುಂಪುಪಾಲಂನಲ್ಲಿರುವ ಸೇಂಟ್ ಆಂಟೋನಿ ಚರ್ಚ್ ಬಳಿ ಶೀಬಾ ಅರುಣ್ ಕುಮಾರ್ ಅವರಿಗೆ ಕರೆ ಮಾಡಿದ್ದಳು. ಅರುಣ್ ಸ್ವಲ್ಪ ದೂರ ಹೋಗುವ ಮೊದಲು ಇಬ್ಬರು ಮಾತನಾಡುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. ಶೀಬಾ ಅವರತ್ತ ನಡೆದುಕೊಂಡು ಹೋಗಿ ಆಯಸಿಡ್ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿದೆ.  ದಾಳಿಯಲ್ಲಿ ಅರುಣ್ ಕುಮಾರ್ ಅವರ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಶೀಬಾ ಅವರ ಮುಖ ಮತ್ತು ಕೈಗೂ ಗಂಭೀರ ಗಾಯಗಳಾಗಿವೆ. ಅರುಣ್ ಕುಮಾರ್ ಅವರು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

See also  ರೈಲು ಹೈಜಾಕ್ ಪ್ರಕರಣದ ಎಲ್ಲ ಒತ್ತೆಯಾಳುಗಳ ಬಿಡುಗಡೆ..! ಕಾರ್ಯಾಚರಣೆಯಲ್ಲಿ 30 ಉಗ್ರರ ಹತ್ಯೆ, ಪಾಕ್ ನ 27 ಸೈನಿಕರು ಹುತಾತ್ಮ..!
  Ad Widget   Ad Widget   Ad Widget   Ad Widget   Ad Widget