ಕ್ರೈಂ

ಪಂಜ ಮೂಲದ ಪತ್ರಕರ್ತ ವಾಗೀಶ್ ಕುಮಾರ್ ಬೆಂಗಳೂರಿನಲ್ಲಿ ನಿಧನ

ಬೆಂಗಳೂರು: ಪಂಜ ಸಮೀಪದ ಗಟ್ಟಿಗಾರಿನವರಾಗಿದ್ದ ವಾಗೀಶ್ ಕುಮಾರ್‌ರವರು ಕನ್ನಡ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚುಕಾಲ ತಮ್ಮದೇ ಆದ ಛಾಪು ಮೂಡಿಸಿದ್ದರು.

ಈಟಿವಿ ಕನ್ನಡದ ಮೂಲಕ ವೃತ್ತಿ ಆರಂಭಿಸಿದ ವಾಗೀಶ್ ಕುಮಾರ್, ಬಳಿಕ ಟಿವಿ 9, ಕಸ್ತೂರಿ ಟಿವಿ, ಸಮಯ ಟಿವಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ಆನಂತರ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ, ಲವಲವಿಕೆ ಸಪ್ಲಿಮೆಂಟರಿಗಳಲ್ಲೂ ಕೆಲಸ ಮಾಡಿದ್ದರು. ಕಳೆದ ಕೆಲ ಸಮಯದಿಂದ ಆರೋಗ್ಯ ಕೈಕೊಟ್ಟ ಕಾರಣ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related posts

ಉಡುಪಿ: ರಾತ್ರಿ ರಸ್ತೆ ಕಾಮಗಾರಿಯ ಹೊಂಡಕ್ಕೆ ಬಿದ್ದ ಕಾರು..! ಪರಿಶೀಲನೆ ನಡೆಸಿದ ಪೊಲೀಸರು

ವ್ಯಕ್ತಿಯ ಸ್ಕ್ಯಾನಿಂಗ್ ರಿಪೋರ್ಟ್ ನಿಂದ ತಿಳಿಯಿತು ಆಘಾತಕಾರಿ ವಿಷಯ..! ಆತನ ಗೆಳೆಯರೇ ಮಾಡಿದ್ದರಾ ಅಮಾನವಿಯ ಕೃತ್ಯ?

ಮೋದಿಗೆ ಆತ್ಮಹುತಿ ಬಾಂಬ್‌ ದಾಳಿ ಬೆದರಿಕೆ ಪತ್ರ; ಓರ್ವನ ಬಂಧನ