ನ್ಯೂಸ್ ನಾಟೌಟ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತ್ತುಗೊಳಿಸಿದೆ. ಭಾರತದ ಜೊತೆಗಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಪಾಕಿಸ್ತಾನ ಕಡಿದುಕೊಂಡಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿರುವ ಪಾಕಿಸ್ತಾನದಲ್ಲಿ ಔಷಧಿಗಳ ಪೂರೈಕೆ ವ್ಯತ್ಯಯವಾಗಿದೆ.
ವ್ಯಾಪಾರ ವಹಿವಾಟು ಸ್ಥಗಿತದಿಂದ ಔಷಧ ಉದ್ಯಮದ ಮೇಲೆ ಉಂಟಾಗಿರುವ ನೇರ ಪರಿಣಾಮದ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆ ಇಲ್ಲ; ಆದರೆ ತುರ್ತು ಯೋಜನೆಗಳು ಈಗಾಗಲೇ ಪಾಕ್ ನಲ್ಲಿ ಜಾರಿಯಲ್ಲಿವೆ ಎಂದು ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರ ದೃಢಪಡಿಸಿದೆ.
2019ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂತಹ ತುರ್ತು ಸನ್ನಿವೇಶಗಳಿಗಾಗಿ ನಾವು ಸಜ್ಜಾಗಿದ್ದೇವೆ. ನಮ್ಮ ಔಷಧಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಪಿಐ (ಆ್ಯಕ್ಟಿವ್ ಫಾರ್ಮಸ್ಯೂಟಿಕಲ್ ಇಂಗ್ರೀಡಿಯೆಂಟ್ಸ್) ಮತ್ತು ವಿವಿಧ ಅತ್ಯಾಧುನಿಕ ಚಿಕಿತ್ಸಾ ಉತ್ಪನ್ನಗಳು ಸೇರಿದಂತೆ ಪಾಕಿಸ್ತಾನದ ಔಷಧೀಯ ಕಚ್ಚಾವಸ್ತುಗಳ ಪೈಕಿ ಶೇಕಡ 30 ರಿಂದ 40ರಷ್ಟು ಪಾಲು ಭಾರತದಿಂದ ಪೂರೈಕೆಯಾಗುತ್ತಿತ್ತು. ಆದರೆ ಈ ಪೂರೈಕೆ ಸರಣಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ, ಚೀನಾ, ರಷ್ಯಾ ಮತ್ತು ಇತರ ಹಲವು ಯೂರೋಪಿಯನ್ ದೇಶಗಳಿಂದ ಪರ್ಯಾಯ ಮೂಲಗಳ ಹುಡುಕಾಟದಲ್ಲಿದೆ.
ರೇಬಿಸ್ ತಡೆ ಲಸಿಕೆ, ಹಾವಿನ ವಿಷಕ್ಕೆ ಮದ್ದು, ಕ್ಯಾನ್ಸರ್ ಚಿಕಿತ್ಸೆ, ಮೊನೊಕ್ಲೊನಾಲ್ ಆಂಟಿಬಾಡಿಗಳು ಮತ್ತು ಇತರ ಪ್ರಮುಖ ಜೈವಿಕ ಉತ್ಪನ್ನಗಳು ಸೇರಿದಂತೆ ಅನೇಕ ಅಗತ್ಯ ವೈದ್ಯಕೀಯ ಔಷಧಿ ಮತ್ತು ಲಸಿಕೆಗಳ ಪೂರೈಕೆ ಭಾರತದಿಂದ ಆಗುತ್ತಿತ್ತು ಎಂದು ವರದಿ ತಿಳಿಸಿದೆ.
ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವು..! ಹಲವರು ಆಸ್ಪತ್ರೆಗೆ ದಾಖಲು