Latestಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

ಭಾರತ ಪಾಕಿಸ್ತಾನ ನಡುವೆ ಅಂಚೆ – ಪಾರ್ಸೆಲ್ ಸೇವೆಯೂ ಸ್ಥಗಿತ..! ಭಾರತೀಯ ಅಂಚೆ ಇಲಾಖೆಯಿಂದ ಆದೇಶ..!

485

ನ್ಯೂಸ್ ನಾಟೌಟ್: ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕ್ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತವು ಶನಿವಾರ(ಮೇ.3) ಪಾಕಿಸ್ತಾನದಿಂದ ವಾಯು ಮತ್ತು ಇತರ ಮಾರ್ಗಗಳ ಮೂಲಕ ವಿನಿಮಯವಾಗುತ್ತಿದ್ದ ಎಲ್ಲಾ ರೀತಿಯ ಅಂಚೆ ಮತ್ತು ಪಾರ್ಸೆಲ್‌ ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

ಈ ಕುರಿತು ಅಂಚೆ ಇಲಾಖೆಯು ಆದೇಶ ಹೊರಡಿಸಿದೆ.

ಈ ಹಿಂದೆ ಪಾಕಿಸ್ತಾನದಿಂದ ಎಲ್ಲಾ ಆಮದಾಗುವ ಸರಕುಗಳನ್ನು ಭಾರತವು ನಿಷೇಧಿಸಿತ್ತು. ಆ ಬಳಿಕ ಪಾರ್ಸೆಲ್ ಸೇರಿದಂತೆ ಅಂಚೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಎ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಬ್ಬ ಕಾಶ್ಮೀರಿ ಸೇರಿದಂತೆ 26 ಮಂದಿ ಮೃ* ತಪಟ್ಟಿದ್ದರು. ಆ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಚೆನ್ನೈಗೆ ಬಂದಿದ್ರಾ ಉಗ್ರರು..? ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ..!

ಗಿಡುಗನಿಗೂ ಪಾಸ್‌ ಪೋರ್ಟ್‌ ಮಾಡಿಸಿದ ವ್ಯಕ್ತಿ..! ಇಲ್ಲಿದೆ ವೈರಲ್‌ ವಿಡಿಯೋ

ಸುಹಾಸ್‌ ಹತ್ಯೆ ಪ್ರಕರಣ: ಮಂಗಳೂರು – ಚಿಕ್ಕಮಗಳೂರು ಗಡಿಯಲ್ಲಿ ತೀವ್ರ ಕಟ್ಟೆಚ್ಚರ..! ಎರಡು ದಿನಗಳ ಹಿಂದೆಯೇ ನಡೆದಿತ್ತು ತಯಾರಿ..!

See also  ದೇವರಿಗೆ ಕೈಮುಗಿದು ಮೂರ್ತಿಯ ಮೇಲಿದ್ದ ಬೆಳ್ಳಿ ಕಿರೀಟ ಎಗರಿಸಿದ ಯುವಕ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget