ನ್ಯೂಸ್ ನಾಟೌಟ್: ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕ್ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತವು ಶನಿವಾರ(ಮೇ.3) ಪಾಕಿಸ್ತಾನದಿಂದ ವಾಯು ಮತ್ತು ಇತರ ಮಾರ್ಗಗಳ ಮೂಲಕ ವಿನಿಮಯವಾಗುತ್ತಿದ್ದ ಎಲ್ಲಾ ರೀತಿಯ ಅಂಚೆ ಮತ್ತು ಪಾರ್ಸೆಲ್ ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.
ಈ ಕುರಿತು ಅಂಚೆ ಇಲಾಖೆಯು ಆದೇಶ ಹೊರಡಿಸಿದೆ.
ಈ ಹಿಂದೆ ಪಾಕಿಸ್ತಾನದಿಂದ ಎಲ್ಲಾ ಆಮದಾಗುವ ಸರಕುಗಳನ್ನು ಭಾರತವು ನಿಷೇಧಿಸಿತ್ತು. ಆ ಬಳಿಕ ಪಾರ್ಸೆಲ್ ಸೇರಿದಂತೆ ಅಂಚೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಎ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಬ್ಬ ಕಾಶ್ಮೀರಿ ಸೇರಿದಂತೆ 26 ಮಂದಿ ಮೃ* ತಪಟ್ಟಿದ್ದರು. ಆ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಚೆನ್ನೈಗೆ ಬಂದಿದ್ರಾ ಉಗ್ರರು..? ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ..!
ಗಿಡುಗನಿಗೂ ಪಾಸ್ ಪೋರ್ಟ್ ಮಾಡಿಸಿದ ವ್ಯಕ್ತಿ..! ಇಲ್ಲಿದೆ ವೈರಲ್ ವಿಡಿಯೋ