ಕರಾವಳಿ

ಗುತ್ತಿಗಾರು: ಲೋಕಾರ್ಪಣೆಗೂ ಮುನ್ನ ಸೇವೆ ಆರಂಭಿಸಿದ ಆಂಬುಲೆನ್ಸ್

494

ಗುತ್ತಿಗಾರು: ಇಲ್ಲಿನ ಮೇಲಿನ ಪೇಟೆಯಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವ ಪಾರೆಪ್ಪಾಡಿ ಮತ್ತು ಚಿನ್ನಪ್ಪ ಕುಚ್ಚಾಲ ಅವರನ್ನು ಸುಳ್ಯ ಆಸ್ಪತ್ರೆಗೆ ತಲುಪಿಸುವ ಮುಖಾಂತರ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಂಬುಲೆನ್ಸ್ ಸೇವೆ ಪ್ರಾರಂಭ ಮಾಡಿತು. ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಯುವ ಉದ್ಯಮಿ ದುರ್ಗೇಶ್ ಪಾರೆಪ್ಪಾಡಿ ಮಾನವೀಯತೆ ಮೆರೆದು ಆಂಬುಲೆನ್ಸ್ ನ ಸೇವಾ ವೆಚ್ಚವನ್ನು ಗಾಯಾಳು ಸುಳ್ಯಕ್ಕೆ ಆಸ್ಪತ್ರೆಗೆ ತಲುಪುವ ಮೊದಲೇ ಟ್ರಸ್ಟ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಮಾದರಿಯಾದರು. ಆಂಬುಲೆನ್ಸ್ ಇನ್ನೂ ಲೋಕಾರ್ಪಣೆ ಆಗಿರಲಿಲ್ಲ. ಹೀಗಿದ್ದರೂ ತುರ್ತು ಸಂದರ್ಭದಲ್ಲಿ ಸೇವೆ ಆರಂಭ ಮಾಡಿರುವುದು ವಿಶೇಷ.

See also  ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ 'ಗೋಕುಲಂ' ವಸ್ತ್ರ ಮಳಿಗೆ,'ಬಿಗ್ ಡಿಸ್ಕೌಂಟ್ ಮೇಳ'ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ
  Ad Widget   Ad Widget   Ad Widget   Ad Widget