ನ್ಯೂಸ್ ನಾಟೌಟ್: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕಾನತ್ತಿಲ ಉಳ್ಳಾಕುಳು ದೈವಸ್ಥಾನ (ಮಾಡ) ರಸ್ತೆಗೆ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾರವರು ಒದಗಿಸಿದ ರೂ. 5 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣ ಮತ್ತು ಸುಳ್ಯ ನಗರ ಪಂಚಾಯತ್ ಅನುದಾನ ಮೂಲಕ ಯೋಜಿಸಿದ ರಸ್ತೆ ಅಗಲೀಕರಣ ಕಾರ್ಯಕ್ರಮಕ್ಕೆ ಎ.29ರಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.ಕಾನತ್ತಿಲ ಉಳ್ಳಾಕುಳು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹೇಮನಾಥ ಕುರುಂಜಿಯವರು ಮಹಾಗಣಪತಿ ದೇವರನ್ನು ಪ್ರಾರ್ಥಿಸಿ ದೀಪ ಬೆಳಗಿದರು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಅವರು ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು.
ಅನುದಾನ ಒದಗಿಸಿಕೊಡುವಲ್ಲಿ ಶ್ರಮವಹಿಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಮಾಜಿ ಉಪಾಧ್ಯಕ್ಷರು ಹಾಗೂ ಸ್ಥಳೀಯ ಸದಸ್ಯೆ ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯ ಸುಧಾಕರ್ ಉಪಸ್ಥಿತರಿದ್ದರು. ರಸ್ತೆ ಅಗಲೀಕರಣಕ್ಕೆ ಅಗತ್ಯ ಸ್ಥಳದಾನಿಗಳಾದ ವೆಂಕಟರಮಣ ಭಟ್ (ಶರಧಿ) ಇವರ ಕೊಡುಗೆಯನ್ನು ಪ್ರಶಂಶಿಸಿದರು.ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಲದೀಪ್ ಪೆಲ್ತಡ್ಕ ಸ್ವಾಗತಿಸಿದರು.ಬಿಜೆಪಿ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಎಸ್ ವಂದಿಸಿದರು.
View this post on Instagram
ಸ್ಥಳೀಯ ಸಂಘಟಕ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಕಾನತ್ತಿಲ ಉಳ್ಳಾಕುಳು ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಸಂದೇಶ್ ಕುರುಂಜಿ, ಶ್ರೀ ರಾಮ ಭಜನಾ ಸೇವಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎಂ.ಆರ್, ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸ್ಥಳೀಯರಾದ ಮೋಹನ್ ದೇವರಗುಂಡ, ವಿಶ್ವನಾಥ್ ಪೆರುಮುಂಡ, ಪುರುಷೋತ್ತಮ ಕನ್ನಡ್ಕ, ಮೋನಪ್ಪ ನಾರಾಲು, ಸುಶೀಲ, ಸವಿತಾ ಸತೀಶ್, ಸತ್ಯನಾರಾಯಣ ಭಟ್, ಸಂತೋಷ್ ಕುಮಾರ್ ಭಂಡಾರಿ, ಪ್ರಕಾಶ್ ಭಂಡಾರಿ, ಸುಂದರ ಪೂಜಾರಿ, ನಿಕೇಶ್ ಉಬರಡ್ಕ, ದಕೋಜಿ ರಾವ್, ಶಿವಪ್ರಕಾಶ್ ಕುತ್ಪಾಜೆ, ಯಜ್ಞೇಶ್ ಕಾನತ್ತಿಲ, ಭಾ.ಜ.ಪ. ವಾರ್ಡ್ ಸಮಿತಿ ಕಾನತ್ತಿಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಂಟ್ರಾಕ್ಟರ್ ದಾರರಾದ ಹರಿಪ್ರಸಾದ್ ಎಲಿಮಲೆ ಉಪಸ್ಥಿತರಿದ್ದರು. ರಸ್ತೆಯ ಫಲಾನುಭವಿ ನಾಗರಿಕ ಬಂಧುಗಳು ಇದ್ದು ರಸ್ತೆ ಅಭಿವೃದ್ಧಿ ಯೋಜನೆಯ ಕಾರ್ಯರೂಪಕ್ಕೆ ಸಾಕ್ಷಿಗಳಾದರು.