ಕೊಡಗು

ಕೊಡಗು ಸಂಪಾಜೆ ನಾಡ ಕಚೇರಿಗೆ ಗೋಪಾಲ ಕಲ್ಲುಗುಡ್ಡೆ ವರ್ಗಾವಣೆ

ಕಡಬ: ಬಂಟ್ವಾಳ ತಾಲೂಕು ಕಛೇರಿ ಪ್ರಥಮ ದರ್ಜೆ ಸಹಾಯಕ ಗೋಪಾಲ ಕಲ್ಲುಗುಡ್ಡೆ ಅವರು ಉಪ ತಹಶೀಲ್ದಾರ್ ಆಗಿ ಬಡ್ತಿ ಪಡೆದಿದ್ದಾರೆ. ಇದೀಗ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆ ನಾಡ ಕಚೇರಿಗೆ ವರ್ಗಾವಣೆ ಗೊಂಡಿದ್ದಾರೆ. ಬಂಟ್ವಾಳದಲ್ಲಿ ಗ್ರಾಮಕರಣಿಕ ಹುದ್ದೆಗೆ ಸೇರ್ಪೆಡೆಗೊಂಡ ಗೋಪಾಲ ಅವರು ಬಳಿಕ ಪುತ್ತೂರು ತಾಲೂಕು ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿಗೊಂಡು ಬಂಟ್ವಾಳ ತಾಲೂಕು ಕಛೇರಿಗೆ ವರ್ಗಾವಣೆಗೊಂಡಿದ್ದರು. ಕಳೆದ ಐದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ನಿಯೋಜನೆ ಮೇರೆಗೆ ಮಂಗಳೂರು ತಾಲೂಕು ಕಛೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.

Related posts

ಕೂಡಿಗೆ ಸೈನಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕ ನಾಪತ್ತೆ

ನಾಳೆ ಕೊಡಗು ಜಿಲ್ಲೆಯ ಶಾಲಾ – ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಸುಳ್ಯ: ಬೈರಾ ಸಮಾಜದ ಕ್ರೀಡಾಕೂಟ, ವಿಜೇತರಿಗೆ ಪ್ರಶಸ್ತಿ ವಿತರಣೆ