Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಕೋಲ್ಕತ ಹೋಟೆಲ್ ​ನಲ್ಲಿ ಬೆಂಕಿ ಅವಘಡಕ್ಕೆ 14 ಮಂದಿ ಸಜೀವ ದಹನ..! ಇಲ್ಲಿದೆ ವಿಡಿಯೋ

437

ನ್ಯೂಸ್ ನಾಟೌಟ್ : ಕೇಂದ್ರ ಕೊಲ್ಕತ್ತಾದ ಫಲಪತ್ತಿ ಮಚ್ಚುವಾ ಬಳಿಯ ಹೋಟೆಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ, ರಿತುರಾಜ್ ಹೋಟೆಲ್ ನ ಆವರಣದಲ್ಲಿ ಏ.29ರ ರಾತ್ರಿ 8.15ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಇದುವರೆಗೆ 14 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ತಂಡಗಳು ಹಲವು ಮಂದಿಯನ್ನು ರಕ್ಷಿಸಿವೆ ಎಂದು ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಇದೀಗ ಬೆಂಕಿ ನಿಯಂತ್ರಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ತನಿಖೆ ಪ್ರಗತಿಯಲ್ಲಿದ್ದು, ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ವಿವರಿಸಿದ್ದಾರೆ.

See also  ಅಮೆರಿಕದ ನಿವೃತ್ತ ಯೋಧನೇ ಈಗ ಶಂಕಿತ ಉಗ್ರ..!ಮಾನವ ಸಂಪನ್ಮೂಲ ತಜ್ಞ ಮತ್ತು ಐಟಿ ತಜ್ಞರಾಗಿ ಸೇನೆಯಲ್ಲಿ ಸೇವೆ..!
  Ad Widget   Ad Widget   Ad Widget   Ad Widget