ನ್ಯೂಸ್ ನಾಟೌಟ್: ಮುಂಜಾನೆ ಎದ್ದು ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದ ಕಾರ್ಮಿಕ ಮಹಿಳೆಯನ್ನು ಆನೆ ತುಳಿದು ಸಾಯಿಸಿದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ನಡೆದಿದೆ. ಅರ್ತಿಯಡ್ಕ ಸಿಆರ್ಸಿ ಕಾಲೋನಿ ನಿವಾಸಿ ಸೆಲ್ಲಮ್ಮ ಆನೆ ದಾಳಿಗೆ ಮೃತ ಪಟ್ಟವರು ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ 15 ಲಕ್ಷ ರೂ.ಪರಿಹಾರ ಹಾಗೂ ಕೆಎಫ್ ಡಿಸಿಯಿಂದ ಸೂಕ್ತ ಪರಿಹಾರಕ್ಕೆ ಶಾಸಕರು ಸೂಚನೆ ನೀಡಿದ್ದಾರೆ. ಶಾಸಕರು ವೈಯಕ್ತಿಕ ನೆಲೆಯಲ್ಲಿ 10 ,000 ರೂ ಪರಿಹಾರ ನೀಡಿದ್ದಾರೆ.
ಆನೆ ದಾಳಿಗೆ ಕಾರ್ಮಿಕ ಮಹಿಳೆ ಮೃತಪಟ್ಟ ಘಟನೆ ಗೊತ್ತಾಗುತ್ತಲೆ ಸ್ಥಳಕ್ಕೆ ಕಾರ್ಮಿಕರು ಧಾವಿಸಿ ಬಂದಿದ್ದಾರೆ.
ಯುದ್ಧ ನಡೆದರೆ ಭಾರತೀಯ ಸೈನಿಕರ ಗೆಲುವಿಗಾಗಿ ಸತತ 10 ಗಂಟೆಗಳ ವಿಶೇಷ ಪೂಜೆ..! ಪರಶುರಾಮನ ಬೃಹತ್ ಕೊಡಲಿಯಿಟ್ಟು ಯಾಗ..!