ಕೊಡಗು

ಕಾಡಾನೆಗೆ ಹೆದರಿ ಮರವೇರಿದ ಕೃಷಿಕ, ಮರ ಏರಿದರೂ ಪಟ್ಟು ಬಿಡದೆ ಹಿಡಿದೆಸೆದ ಒಂಟಿ ಸಲಗ

468

ಮಡಿಕೇರಿ: ಕಾಡಾನೆ ಕಂಡಾಕ್ಷಣ ಭಯಗೊಂಡು ಮರವೇರಿದ ಕೃಷಿಕರೊಬ್ಬರನ್ನು ಒಂಟಿ ಸಲಗ ಸೊಂಡಿಲಿನಿಂದ ಎಳೆದು ಬಿಸಾಡಿ ಬಲಿ  ಪಡೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಸ್ಥಳೀಯ ರೈತ ರಾಜೇಶ್ (50) ಎಂಬುವವರೇ ಮೃತ ದುರ್ದೈವಿ.

ಬುಧವಾರ ರಾತ್ರಿ ಹಸುಗಳಿಗೆ ಹುಲ್ಲು ಹಾಕಲು ಮನೆಯಿಂದ ಹೊರ ಬಂದಾಗ ಹುಲ್ಲು ರಾಶಿಯ ಬಳಿಯೇ ಕಾಡಾನೆ ನಿಂತಿರುವುದು ಕಂಡು ಬಂದಿದೆ. ಭಯಗೊಂಡ ರಾಜೇಶ್ ಪಕ್ಕದಲ್ಲೇ ಇದ್ದ ಮರವನ್ನೇರಿದರಾದರೂ ಒಂಟಿ ಸಲಗ ತನ್ನ ಸೊಂಡಿಲಿನಿಂದ ಅವರನ್ನು ಎಳೆದು ಬಿಸಾಡಿದೆ. ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

See also  ಮಡಿಕೇರಿ:ಭೀಕರ ಬೈಕ್ ಅಪಘಾತ,ಕಾಲೇಜ್ ವಿದ್ಯಾರ್ಥಿನಿ ದಾರುಣ ಅಂತ್ಯ
  Ad Widget   Ad Widget   Ad Widget   Ad Widget