ಕ್ರೈಂ

ಮೂವರು ಹೆಂಡತಿಯರಿಗೆ ಮಕ್ಕಳ ಕರುಣಿಸಿ ನಾಲ್ಕನೇಯವಳ ಜತೆ ಓಡಿ ಹೋದ ಮಹಾ ವಂಚಕ ಮಂತ್ರವಾದಿ..!

ಚಿಕ್ಕಮಗಳೂರು: ಬಣ್ಣದ ಮಾತುಗಳಿಂದ ಹೆಣ್ಣು ಮಕ್ಕಳನ್ನು ಮರಳು ಮಾಡಿದ ಮಂತ್ರವಾದಿಯೊಬ್ಬ ಮೂವರು ಮಹಿಳೆಯರಿಗೆ ಮಹಾ ಮೋಸ ಮಾಡಿ ನಾಲ್ಕನೇ ಯವಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಮಂತ್ರವಾದಿ ನೀಡಿದ ಮಕ್ಕಳೊಂದಿಗೆ ಕಣ್ಣೀರು ಹಾಕುತ್ತ ಮೂವರು ಹೆಂಡತಿಯರು ದಿನ ಕಳೆಯುತ್ತಿದ್ದಾರೆ. ಪೊಲೀಸರಿಗೂ ದೂರನ್ನು ನೀಡದೆ ಕಷ್ಟಪಟ್ಟು ಜೀವನ ತಳ್ಳುತ್ತಿದ್ದಾರೆ. ಆದರೆ, ಮಂತ್ರವಾದಿಯ ನಸೀಬು ಕೆಟ್ಟಿದ್ದರಿಂದ ಈಗ ಕಳಸ ಪೊಲೀಸ್‌ ಠಾಣೆಯಲ್ಲಿ ಕೇಸು ಜಡಿದಿದೆ. 

ಯಾರೀತ ಮಂತ್ರವಾದಿ?

ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಸಮೀಪದ ಕಡ್ಲೆಮಕ್ಕಿಯ ಯೂಸುಫ್ ಹೈದರ್‌ ಆರೋಪಿ. ಮೂವರು ಮಹಿಳೆಯರಿಗೆ ಮಕ್ಕಳನ್ನು ಕರುಣಿಸಿ ಎಸ್ಕೇಪ್ ಆಗಿದ್ದ ಈತ, ಈಗ ಕಳಸ ಪಟ್ಟಣದ ವಿಚ್ಛೇದಿತ ಮಹಿಳೆ ಮತ್ತು ಆಕೆಯ 4 ವರ್ಷದ ಮಗನೊಂದಿಗೆ ಪರಾರಿಯಾಗಿದ್ದಾನೆ. ಈ ಮಹಿಳೆಯ ತಂದೆ ಕಳಸ ಠಾಣೆಯಲ್ಲಿದೂರು ದಾಖಲಿಸಿದ್ದಾರೆ. ಯೂಸುಫ್ ಹೈದರ್‌ಗೆ  ಮದುವೆ ಆಗುವುದೇ ಚಟವಾಗಿದೆ. ಸಕಲೇಶಪುರ ತಾಲೂಕು ಬಾಳ್ಳುಪೇಟೆಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ಈತ ಆಕೆಗೆ ಎರಡು ಮಕ್ಕಳನ್ನು ಕರುಣಿಸಿ ದೂರವಾಗಿದ್ದ. ನಂತರ ಮೂಡಿಗೆರೆಯ ಮಹಿಳೆಯೊಬ್ಬರನ್ನು ಮದುವೆಯಾಗಿ 6 ತಿಂಗಳು ಮಾತ್ರ ಜತೆಗಿದ್ದ. ಆಕೆಯಿಂದಲೂ ದೂರವಾದ ಹೈದರ್‌, ತಾಲೂಕಿನ ಆಲ್ದೂರಿನ ಮಹಿಳೆ ಜತೆ ಮೂರನೇ ಮದುವೆಯಾಗಿ 4 ವರ್ಷ ಸಂಸಾರ ಮಾಡಿ ಒಂದು ಹೆಣ್ಣು ಮಗುವನ್ನು ನೀಡಿ ಪರಾರಿಯಾಗಿದ್ದಾನೆ. ಮೂವರಿಗೆ ಮೋಸ ಮಾಡಿದ ಮಂತ್ರವಾದಿ ಹೈದರ್‌, ಈಗ ಕಳಸದ ಮಹಿಳೆ ಜತೆ ಎಸ್ಕೇಪ್ ಆಗಿದ್ದಾನೆ. ದೇವರ ಹೆಸರಲ್ಲಿ ಮೋಸ ಸಮಸ್ಯೆಗಳಿಂದ ನೊಂದಿರುವ ಬಡ ಕುಟುಂಬದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದ್ದ. ವಶೀಕರಣದಿಂದ ಸುಲಭವಾಗಿ ಮಹಿಳೆಯರನ್ನು ಒಲಿಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ದೇವರ ಹೆಸರಿನಲ್ಲಿದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.

Related posts

ತಂದೆಯ ಜೊತೆಗಿನ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದೇನು? ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುದೇಕೆ?

ವಿಶ್ವವಿದ್ಯಾಲಯದ 190 ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ಮಾಡಿದ್ದೇಕೆ..? ಸಾಮಾಜಿಕ ಜಾಲತಾಣದಲ್ಲಿ ವರದಿ ಜೊತೆಗೆ ಹೆಸರು,ಫೋನ್ ನಂಬರ್ ವೈರಲ್!

ತಡವಾಗಿ ಬೆಳಕಿಗೆ ಬಂತು ಪಾಪಿ ಮಗ ಕೃತ್ಯ..! ತಂದೆ ಮೇಲೆ ಮಾರಣಾಂತಿಕ ಹಲ್ಲೆಗೆ ಕಾರಣವೇನು..? ಇಲ್ಲಿದೆ ವೈರಲ್ ವಿಡಿಯೋ