ದೊಡ್ಡತೋಟ: ಇಲ್ಲಿನ ಸಮೀಪ ಓಮ್ನಿಯೊಂದು ತೋಟಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಜಖಂಗೊಂಡ ಘಟನೆ ಇಂದು ಮಧ್ಯಾಹ್ನ 3.30 ಕ್ಕೆ ನಡೆದಿದೆ. ಬೈತಡ್ಕದ ಭರತ್ ಕುಮಾರ್ ರವರು ಬಾಲಕೃಷ್ಣ, ಗುಣಪಾಲ, ಮತ್ತು ದಿನೇಶರೊಂದಿಗೆ ಮಡಪ್ಪಾಡಿಗೆ ತುಪ್ಪದ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ನಾಲ್ವರಿಗೂ ಜಖಂ ಆಗಿದ್ದು ಅವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.