Latest

ಸುಳ್ಯ: ಮಳೆ ಆರ್ಭಟ, ಶಾಲೆಗಳಿಗೆ ರಜೆ ಘೋಷಣೆ

998

ನ್ಯೂಸ್ ನಾಟೌಟ್:  ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಇಂದು (ಜೂ.17) ಸುಳ್ಯ ತಾಲೂಕಿನ ಅಂಗನವಾಡಿ ಶಾಲೆಗೆ ತಹಶೀಲ್ದಾರ್ ಮಂಜುಳಾ ಅವರು ರಜೆ ಘೋಷಿಸಿದ್ದಾರೆ. ಕಾಲೇಜುಗಳಿಗೆ ರಜೆ ಇಲ್ಲ, ಅಂಗನವಾಡಿ, ಪ್ರಾಥಮಿಕ, ಹೈಸ್ಕೂಲ್ ತನಕದ ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದೆ ಎಂದು ಮಂಜುಳಾ ಅವರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಇದ್ದು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು ತುಂಬಿದ ನದಿ, ಕೆರೆ, ಹಳ್ಳ-ಕೊಳ್ಳಗಳತ್ತ ಹೋಗದಂತೆ ತಿಳಿಸಲಾಗಿದೆ.

See also  ಜೈಲಿನಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಬೆಕ್ಕು ಪೊಲೀಸ್ ವಶಕ್ಕೆ..! ಏನಿದು ವಿಚಿತ್ರ ಪ್ರಕರಣ..?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget