ನಮ್ಮಲ್ಲೇ ಫಸ್ಟ್

ಬೊಮ್ಮಾಯಿ ಒಬ್ಬರೇ ನಾಳೆ ಪ್ರಮಾಣ ವಚನ ಸ್ವೀಕಾರ : ನ್ಯೂಸ್‌ ನಾಟೌಟ್ ಗೆ ಉನ್ನತ ಮೂಲಗಳ ಮಾಹಿತಿ

ಬೆಂಗಳೂರು: ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಬಸವರಾಜ್‌ ಬೊಮ್ಮಾಯಿ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನ್ಯೂಸ್‌ ನಾಟೌಟ್ ಗೆ ಉನ್ನತ ಮೂಲಗಳು ಮಾಹಿತಿ ನೀಡಿದ್ದು ನಂತರ ದಿನದಲ್ಲಿ ಕ್ಯಾಬಿನೆಟ್‌ ಫೈನಲ್‌ ಆಗಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಇದೇ ರೀತಿ ಆಗಿತ್ತು. ಇದೇ ವೇಳೆ ನಳೀನ್ ಕುಮಾರ್‌ ಕಟೀಲ್ ಮಾತನಾಡಿ ಸರ್ವ ಸಮಿತಿಯ ನಿರ್ಧಾರದ ಮೇರೆಗೆ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಹಿರಿಯ ರಾಜಕಾರಣಿ ಅವರಿಂದ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related posts

ಮಹಿಳಾ ರಾಜಕಾರಣಿಯ ಬಕೆಟ್‌ ಗಿರಿ: ಗೋಳಿತೊಟ್ಟಿನ ದಲಿತ ಪಿಡಿಒಗೆ ವರ್ಗಾವಣೆ ಶಿಕ್ಷೆ..?

ಇದೆಂಥಾ ಅನ್ಯಾಯಾ..? ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ವೇತನವೇ ನೀಡದೆ ಕೆಲಸದಿಂದ ಕಿತ್ತು ಹಾಕಿದ್ರು..! ನಮ್ಮಲ್ಲೇ ಫಸ್ಟ್‌-ನ್ಯೂಸ್‌ ನಾಟೌಟ್ ವಿಶೇಷ ವರದಿ

ಮುಟ್ಟಿದ್ರೆ ಶಾಕ್ಕು…ಮೈಯೆಲ್ಲ ಶೇಖ್ಖು…ಸುಳ್ಯದಲ್ಲೊಂದು ಕರೆಂಟ್ ಹೊಡೆಸುವ ಎಟಿಎಂ..!