ದೇಶ-ಪ್ರಪಂಚ

ವಿವಾಹಿತೆಗೆ ಪ್ರೇಮಪತ್ರ ಕೊಡುವುದು ಅಪರಾಧ: ಬಾಂಬೆ ಹೈಕೋರ್ಟ್‌

ನಾಗ್ಪುರ: ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿ ಎಸೆಯುವುದು ಆಕೆಯನ್ನು ಅವಮಾನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಹೇಳಿದೆ. ಮಹಿಳೆಗೆ ಘನತೆ ಎಂಬುದು ಆಭರಣವಿದ್ದಂತೆ. ಅದಕ್ಕೆ ದಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 2011ರಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಶ್ರೀಕೃಷ್ಣ ತವರಿ ಎಂಬಾಬ ಪ್ರೇಮ ಪತ್ರ ನೀಡುತ್ತಾನೆ. ಆಕೆ ನಿರಾಕರಿಸಿದಾಗ ಆತ ಲವ್‌ ಲೆಟರ್‌ ಎಸೆದು ಪ್ರೇಮ ನಿವೇದನೆ ಮಾಡಿ ಅಶ್ಲೀಲವಾಗಿ ವರ್ತಿಸುತ್ತಾನೆ. ಈ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿದೆ. ತನ್ನ ಮೇಲಿನ ದೂರಿನ ಬಗ್ಗೆ ಆತ ಪ್ರತಿ ದೂರು ನೀಡಿದರೂ ವಿಚಾರಣೆ ವೇಳೆ ಆತನ ವಿರುದ್ಧ ಆರೋಪ ಸಾಬೀತಾಗಿತ್ತು.

Related posts

ಆನ್‌ಲೈನ್‌ನಲ್ಲಿ ಮಿಲ್ಕ್‌ಶೇಕ್‌ ಆರ್ಡರ್‌ ಮಾಡಿದವನಿಗೆ ಸಿಕ್ಕಿದ್ದು ಭರ್ತಿ ಒಂದು ಗ್ಲಾಸ್‌ ಮೂತ್ರ..!ಈ ಬಗ್ಗೆ ಫೋಟೋ ಹಂಚಿಕೊಂಡು ಗ್ರಾಹಕ ಹೇಳಿದ್ದೇನು ಗೊತ್ತಾ?

ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷ ಆಹ್ವಾನ, ಆಹ್ವಾನ ಇದ್ದರೂ ಹೋಗುವುದಿಲ್ಲ ಎಂದ ಮಮತಾ ಬ್ಯಾನರ್ಜಿ..!

ಕಾರಿನಿಂದ ಬಯಲಾಯಿತು ಪತ್ನಿಯ ಪರಸಂಗದ ಪಲ್ಲಂಗದಾಟ..!