ಸುಳ್ಯ

ಬಿಜೆಪಿ ಜನಾಶೀರ್ವಾದ ಯಾತ್ರೆ ಕೊರೊನಾ ಹರಡುವ ಜನಾಕ್ರೋಶ ಯಾತ್ರೆಯಾಗದಿರಲಿ: ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ

ಸುಳ್ಯ : ಬಿಜೆಪಿ ಜನಾಶೀರ್ವಾದ ಯಾತ್ರೆ ಕೊರೊನಾ ಹರಡುವ ಯಾತ್ರೆ ಆಗದಿರಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ದೇಶ, ರಾಜ್ಯದಲ್ಲಿ ಕೊವಿಡ್ ಮಹಾಮಾರಿ ಒಂದಷ್ಟು ಕಡಿಮೆ ಪ್ರಮಾಣಕ್ಕೆ ಇಳಿದಾಗ ದೇಶಾದ್ಯಂತ ಚುನಾವಣೆಯನ್ನು ಘೋಷಣೆ ಮಾಡಿ ಬಿಜೆಪಿಯ ಗ್ರಾಮ ಮಟ್ಟದ ನಾಯಕರಿಂದ ಹಿಡಿದು ಮೋದಿಜಿ ಯವರೆಗೆ ಎಗ್ಗಿಲ್ಲದೆ ಪಶ್ಚಿಮ ಬಂಗಾಳ , ಕೇರಳ , ತಮಿಳುನಾಡು , ಪುಧಿಚೇರಿ , ಕರ್ನಾಟಕ ಹಾಗು ಇನ್ನಿತರ ರಾಜ್ಯಗಳ ಚುನಾವಣೆಯ ಬೃಹತ್ ಸಭೆಗಳನ್ನು ನಡೆಸಿ  , ಕೊರೊನಾ ರೋಗ ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ದಿನವೊಂದಕ್ಕೆ 4 ಲಕ್ಷಕ್ಕಿಂತಲೂ ಅಧಿಕ ಸೋಂಕಿತರು  ಮತ್ತು  3 ಸಾವಿರಕ್ಕಿಂತ ಅಧಿಕ ಮಂದಿ ಕಾಯಿಲೆಗೆ ಮೃತರಾಗಿರುವಂತದ್ದು ಈಗ ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ . ಇದೀಗ ಕೊರೊನಾ ಮಹಾಮಾರಿ ನಮ್ಮ ರಾಜ್ಯದಲ್ಲಿ ಕೊಂಚ  ಇಳಿಮುಖಗೊಂಡಿರುವುದು ಜನ ಸಾಮಾನ್ಯರ ಮನಸ್ಸಿನಲ್ಲಿ ಒಂದಿಷ್ಟು ಧೈರ್ಯವನ್ನು ತಂದುಕೊಳ್ಳುವಂತಾಗಿದೆ . ಆದರೆ , ಕೇಂದ್ರ ಸರಕಾರದ ನಾಲ್ಕು ಮಂತ್ರಿಗಳು ಮೋದಿಯವರ  ಸೂಚನೆಯ ಮೇರೆಗೆ ಕರ್ನಾಟಕದ  4 ದಿಕ್ಕುಗಳಿಂದ ಜನಾಶೀರ್ವಾದ ಕಾರ್ಯಕ್ರಮದ ಯಾತ್ರೆ ಯನ್ನು ಈ ದೇಶ ಮತ್ತು ರಾಜ್ಯದ ಜನರು ಹಸಿವು , ರೋಗ , ಪ್ರವಾಹ , ಬೆಲೆಯೇರಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ  ಕೈಗೊಂಡು ಅಲ್ಲಲ್ಲಿ ಸಾವಿರಾರು ಜನರನ್ನು ಸೇರಿಸಿ ಕೊವಿಡ್ 19 ರ  ನಿಯಮವನ್ನು ಉಲ್ಲಂಘಿಸಿ ಲಂಗು ಲಗಾಮಿಲ್ಲದೆ ಅವರ ಕಾರ್ಯಕ್ರಮದ ಪ್ರಚಾರ ಭಾಷಣಗಳನ್ನು ಮಾಡುತ್ತಿರುವುದು ತೀರ ಕಳವಳಕಾರಿಯಾದ ಸಂಗತಿಯಾಗಿರುತ್ತದೆ. ಇದು ಜನಾಕ್ರೋಶಕ್ಕೆ ಕಾರಣವಾಗಿರುತ್ತದೆ ಎಂದು ತಿಳಿಸಿದ್ದಾರೆ.

Related posts

ಸುಳ್ಯ:ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಪತ್ತೆ

ಸುಳ್ಯ: ‘ಅಯೋಧ್ಯಾ ಬಲಿದಾನ್ ದಿವಸ್’ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ,ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮ ಹೇಗಿತ್ತು?ವಿಡಿಯೋ ವೀಕ್ಷಿಸಿ…

ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ದುರಂತ,ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತ್ಯು