ಕ್ರೈಂ

ಕಣ್ಣಿಗೆ ಕಾರದ ಪುಡಿ ಎರಚಿ ಸಹೋದರರಿಗೆ ತಲವಾರು ಬೀಸಿದ ದುಷ್ಕರ್ಮಿಗಳು

ಬೆಳ್ತಂಗಡಿ: ಸಹೋದರರಿಬ್ಬರಿಗೆ ಕಾರದ ಪುಡಿ ಎರಚಿ ತಲವಾರ್ ನಿಂದ ಕಡಿದು ಕೊಲ್ಲಲು ದುಷ್ಕರ್ಮಿಗಳು ಪ್ರಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಶಾಲೆ ಬಳಿ ನವೆಂಬರ್ ೨೩ರ ತಡರಾತ್ರಿ ನಡೆದಿದೆ. ನೆಲ್ಲಿ ಗುಡ್ಡೆ ನಿವಾಸಿಗಳಾದ ರಿಕ್ಷಾ ಚಾಲಕ ಹೈದರ್ ಹಾಗೂ ಅಣ್ಣ ರಫೀಕ್ ಹಲ್ಲೆಗೊಳಗಾದವರು. ಅಶುತೋಷ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಹೈದರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

Related posts

ಶಿಷ್ಟಾಚಾರ ಉಲ್ಲಂಘಿಸಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇಗುಲ ಸಿಬ್ಬಂದಿ ಅಮಾನತು! ಕಮಿಷನರ್ ಗೆ ದೂರು!

ಗಣೇಶ ಮೂರ್ತಿಯನ್ನಿರಿಸಿದ್ದ ಪೆಂಡಾಲ್ ನಲ್ಲಿ ದಿಢೀರ್ ಬೆಂಕಿ..! ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಾರ್ಥಿಸುತ್ತಿದ್ದಾಗ ಘಟನೆ! ಮುಂದೇನಾಯ್ತು?

ಅಭಿ ಕೊಲ್ಲಿ ಬಳಿ ಬೋರಲು ಬಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ದುರಂತ