Latestಕ್ರೈಂರಾಜ್ಯ

ಭಿಕ್ಷುಕಿಗೆ ಮದ್ಯ ಕುಡಿಸಿ ಬೆಳ್ಳಿ ಒಡೆವೆಗಳನ್ನು ದೋಚಿದ್ದ ದರೋಡೆಕೋರರು ಅರೆಸ್ಟ್..! ಬಿಕ್ಷುಕಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್..!

339

ನ್ಯೂಸ್ ನಾಟೌಟ್: ಫೆಬ್ರವರಿ 12 ರಂದು ರಾಯಚೂರಿನಲ್ಲಿ ಭಿಕ್ಷುಕಿಯೊಬ್ಬಳ ಕೊಲೆ ನಡೆದಿತ್ತು. 30 ಸಾವಿರ ಬೆಲೆ ಬಾಳುವ ಬೆಳ್ಳಿ ಒಡವೆಗಾಗಿ ಬಿಕ್ಷುಕಿ ಕೊಲೆ ಮಾಡಿರುವುದಾಗಿ ಈಗ ತಿಳಿದುಬಂದಿದೆ.
ನೆರೆಯ ಆಂದ್ರ ಪ್ರದೇಶದ ಐಜ ಗ್ರಾಮದ ಬುಡ್ಗ ಸಮುದಾಯದ ಭಿಕ್ಷುಕಿ ರೋಗೆಮ್ಮ ಎಂಬ ಮಹಿಳೆಯನ್ನು, ರಾಮಚಂದ್ರ (19) ಮತ್ತು ಆತನ ಸ್ನೇಹಿತ ಸ್ನೇಹಿತ ತಿಮ್ಮಪ್ಪ(30) ಕೊಲೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನಲ್ಲಿ ನಡೆದ ಭಿಕ್ಷುಕಿ ರೋಗೆಮ್ಮ ಕೊಲೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅನಾಥ ಶವ ಎಂದುಕೊಂಡಿದ್ದ ರೋಗೆಮ್ಮನದ್ದು ಸಹಜ ಸಾವಲ್ಲ ಕೊಲೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆಂಧ್ರ ಪ್ರದೇಶದ ಐಜ ಗ್ರಾಮದ ಬುಡ್ಗ ಸಮುದಾಯದ ಭಿಕ್ಷುಕಿ ಫೆಬ್ರವರಿ 12 ರಂದು ಲಿಫ್ಟ್ ಕೇಳಿ ಕಾರಿಗೆ ಹತ್ತಿದ್ದರು. ಹಂತಕ ಬೋಯಾ ರಾಮಚಂದ್ರ (19) ಮಹಿಳೆಯ ಮೈಮೇಲೆ ಇದ್ದ ಬೆಳ್ಳಿ ಒಡವೆಗಳ ಮೇಲೆ ಕಣ್ಣು ಹಾಕಿದ್ದ. ದಾರಿ ಮಧ್ಯ ಆಕೆಗೆ ಮದ್ಯ ಕುಡಿಸಿ, ಭಿಕ್ಷುಕಿಯ ಕತ್ತು ಕುಯ್ದು ಕೊಲೆ ಮಾಡಿದ್ದ ಎನ್ನಲಾಗಿದೆ. ಆ ನಂತರ ಆಕೆಯ ದೇಹದಲ್ಲಿದ್ದ ಬೆಳ್ಳಿ ಡಾಬು, ಕೈ ಕಡಗ, ಕಾಲ್ ಚೈನ್ ಇತ್ಯಾದಿ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ರೋಗೆಮ್ಮನ ಮೃತದೇಹ ಚಂದ್ರಬಂಡಾ ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತವಾಗಿ ಸಿಕ್ಕಿತ್ತು. ಪೊಲೀಸರು ಮೃತಳ ಚಲನವಲನಗಳ ಪರಿಶೀಲನೆ ಮಾಡಿದಾಗ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ಕಾರು ಮೂಲಕ ಸುಳಿವು ಸಿಕ್ಕಿತ್ತು. ಆ ಕಾರು ಬೋಯಾ ರಾಮಚಂದ್ರನದ್ದು ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ತನಿಖೆಯಲ್ಲಿ ರಾಮಚಂದ್ರ ಮತ್ತು ಆತನ ಸ್ನೇಹಿತ ತಿಮ್ಮಪ್ಪ (30) ಒಂಟಿ ಪ್ರಯಾಣಿಕರನ್ನೇ ಗುರಿಯಾಗಿಸಿ ದರೋಡೆ ಮಾಡುತ್ತಿದ್ದ ಬಗ್ಗೆ ಬಯಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

‘ನಾನು ಡಿಕೆ ಸುರೇಶ್ ಪತ್ನಿ..’ ಎಂದು ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್.ಐ.ಆರ್..! ದೂರಿನಲ್ಲೇನಿದೆ..?

See also  ರೌಡಿಶೀಟರ್‌ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಪೇಜ್‌..! 60 ಅಕೌಂಟ್‌ ನಿಂದ 500ಕ್ಕೂ ಹೆಚ್ಚು ವಿಡಿಯೋ ಗಳನ್ನು ಡಿಲೀಟ್‌ ಮಾಡಿಸಿದ ಸಿಸಿಬಿ..! ಅಡ್ಮಿನ್‌ ಮೇಲೆ ಕೇಸ್ ದಾಖಲು..!
  Ad Widget   Ad Widget   Ad Widget   Ad Widget