ಕರಾವಳಿ

ಉಮ್ಮರ್ ಬೀಜದಕಟ್ಟೆ ತಂಡಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಶಸ್ತಿ

ಬೆಂಗಳೂರು : ಏಷ್ಯಾ-ಪೆಸಿಫಿಕ್ ಎಚ್ ಆರ್ ಎಂ ವತಿಯಿಂದ ನಡೆಸಿದ “ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಅವಿಷ್ಕಾರಗಳು” ಪ್ರಶಸ್ತಿಗೆ ಪ್ರತಿಷ್ಠಿತ ಔಷಧಿ ಕಂಪನಿಯಾದ ಫಾರ್ಮೆಡ್ ಲಿಮಿಟೆಡ್ ಆಯ್ಕೆಯಾಗಿದೆ.

ಅಕ್ಟೋಬರ್ 26ರಂದು ಬೆಂಗಳೂರಿನ  ಹೋಟೆಲ್ ತಾಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯನಿರ್ವಾಹಕ ಉಪಾಧ್ಯಕ್ಷರು ತರಬೇತಿ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಗೂನಡ್ಕದ ಡಾ. ಉಮ್ಮರ್ ಬೀಜದಕಟ್ಟೆಯವರು ತನ್ನ ಸಹೋದ್ಯೋಗಿಗಳಾದ ವಿಕ್ರಮ್ ಸಾಗರ್ ಸಕ್ಸೇನಾ ಮತ್ತು ಆರಿಸ್ ಪಿ ಎಂ (ಡಿಜಿಎಂ – ಎಚ್.ಆರ್) ರವರು ಪ್ರಸ್ತುತ ಪಡಿಸಿದ “ಫಾರ್ಮೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಆವಿಷ್ಕಾರಗಳು ಮತ್ತು ಮೈಲಿಗಲ್ಲುಗಳು” ವಿಷಯದ ಬಗ್ಗೆ ಸೆಮಿನಾರ್ ನೀಡಿದರು. ಕರೋನಾ ಸಂದರ್ಭದಲ್ಲಿ ಫಾರ್ಮೆಡ್ ಸಂಸ್ಥೆ ಉದ್ಯೋಗಿಗಳನ್ನು ನೋಡಿಕೊಂಡ ರೀತಿ, ಕೋವಿಡ್ ನಿರ್ವಹಣೆಯನ್ನು ಶ್ಲಾಘಿಸಿದ ತೀರ್ಪುಗಾರರ ತಂಡ ಈ ಪ್ರಶಸ್ತಿ ಘೋಷಿಸಿರುವುದಾಗಿ ಪ್ರಕಟಿಸಿದ್ದಾರೆ. ಅನೇಕ ಕೈಗಾರಿಕೋದ್ಯಮಿಗಳು, ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದ ಅನೇಕ ಹಿರಿಯರು ಉಪಸ್ಥಿತರಿದ್ದರು.

Related posts

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ;ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ ಪೋಸ್ಟ್ ವೈರಲ್..ಪೋಸ್ಟ್‌ ನಲ್ಲೇನಿದೆ?

ಕೊಕ್ಕಡದಲ್ಲಿ ಕಾಡಾನೆಗಳ ಸಂಚಾರದಿಂದ ಕೃಷಿ ಭೂಮಿಗೆ ಹಾನಿ-ಭಯದಲ್ಲಿ ಗ್ರಾಮಸ್ಥರು

ಪುತ್ತೂರು:ರಸ್ತೆ ಮಧ್ಯೆ ಮಗುಚಿ ಬಿದ್ದ ಟಿಪ್ಪರ್