ಕ್ರೈಂ

ಅವಿನಾಶ್ ಬಸ್ ಮಾಲೀಕ ನಾರಾಯಣ ರೈ ಆತ್ಮಹತ್ಯೆ

589

ಸುಳ್ಯ: ಅವಿನಾಶ್ ಬಸ್ ನ ಮಾಲೀಕ ನಾರಾಯಣ ರೈ ಯವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಮಾನಸಿಕವಾಗಿ ತೀವ್ರ ನೊಂದಿದ್ದರು ಎಂದು ಹೇಳಲಾಗುತ್ತಿದೆ. ಸುಳ್ಯದ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದಂತಹ ಸಂದರ್ಭದಲ್ಲಿ ನಾರಾಯಣ ರೈಯವರು ಬಸ್ ಸೇವೆಯನ್ನು ಆರಂಭಿಸಿ ಗ್ರಾಮೀಣ ಭಾಗದಲ್ಲಿ ಬಸ್ ಓಡಾಡುವಂತೆ ಮಾಡಿದ್ದರು. ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವ ಜನರ ದೈನಂದಿನ ಜೀವನದಲ್ಲಿ ಇವರ ಅವಿನಾಶ್ ಬಸ್‌ ಜೀವನಾಡಿಯೇ ಆಗಿ ಹೋಗಿತ್ತು. ತೊಡಿಕಾನ, ಅರಂತೋಡು, ಸುಳ್ಯ ಸರ್ವೀಸ್ ಹೊಂದಿರುವ ಅವಿನಾಶ್ ಬಸ್ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.

See also  ದರ್ಶನ್ ಆ್ಯಂಡ್ ಟೀಮ್ ನಿಂದ ನಿರಂತರ ರೌಡಿಗಳ ಸಂಪರ್ಕ..! ಹಲವು ದಂಧೆಗಳಲ್ಲಿ ದಾಸನಿಗೆ ರೌಡಿಗಳಿಂದ ಸಹಾಯ..?
  Ad Widget   Ad Widget   Ad Widget   Ad Widget   Ad Widget