ಸುಳ್ಯ: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ ಸೇವಾ ಯೋಜನೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ಸಿಬ್ಬಂದಿ ವತಿಯಿಂದ ಸಹಾಯ ಧನ ವಿತರಿಸಲಾಯಿತು. ಇದೇ ವೇಳೆ ಯೋಜನೆ ಆರಂಭಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಎಲ್ಲ ಕೆಲಸಗಳಿಗೂ ಒಳಿತಾಗಲಿ ಎಂದು ಸಿಬ್ಬಂದಿ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಸಿಬ್ಬಂದಿಗಳಾದ ಜಯಪ್ರಕಾಶ್ ಕಾಂತಿಲ, ಚೋಮಯ್ಯ ಮೆಟ್ಟಿನಡ್ಕ, ಅಭಿಲಾಷ ,ಅನಿತಾ ಚಾರ್ಮಾತ, ತೇಜೇಶ್ವರಿ ಆಜಡ್ಕ, ಕಾವೇರಿ ಕುಕ್ಕುಜೆ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯರಾದ ಮೋಹನ್ ದಾಸ್ ಶಿರಾಜೆ, ರಿಕ್ಷಾ ಯೂನಿಯನ್ ಜೊತೆ ಕಾರ್ಯದರ್ಶಿ ವಸಂತ ಛತ್ರಪ್ಪಾಡಿ ಉಪಸ್ಥಿತರಿದ್ದರು.