ಕರಾವಳಿ

ಅಜ್ಜಾವರದಲ್ಲಿ ಚಿರತೆ, ಮರಿ ಚಿರತೆ ಪ್ರತ್ಯಕ್ಷ, ಊರವರಲ್ಲಿ ಆತಂಕ, ಅರಣ್ಯ ಇಲಾಖೆ ಮೌನ

766

ಸುಳ್ಯ: ಅಜ್ಜಾವರ ಗ್ರಾಮದ ಮುಂಡೋಲಿಮೂಲೆ ಸೂರ್ಯ ಎಂಜಿ ಎನ್ನುವವರ ತೋಟದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ತನ್ನ ಮರಿ ಚಿರತೆಯ ಜತೆಗೆ ಗ್ರಾಮದಲ್ಲಿ ಸುತ್ತಾಟ ನಡೆಸುತ್ತಿದೆ. ಸೂರ್ಯ ಅವರ ತೋಟದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಹಾಗೂ ಅದರ ಮರಿ ಗುರುವಾರ ಮನೆ ಕೆಲಸದವನು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮತ್ತೆ ದಾರಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಹಲವು ಜನರಿಗೂ ಕಾಣಿಸಿಕೊಂಡಿದೆ. ಆದರೆ ಅರಣ್ಯಾಧಿಕಾರಿಗಳಾಗಲಿ ಅಥವಾ ಸ್ಥಳೀಯ ಆಡಳಿತಾಧಿಕಾರಿಗಳಾಗಲಿ ಇದುವರೆಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ನ್ಯೂಸ್ ನಾಟೌಟ್ ತಂಡದ ಜತೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ಕರಾವಳಿಯಾದ್ಯಂತ ರಾಮನಾಮ ಜಪದಲ್ಲಿ ನಿರತರಾದ ರಾಮಭಕ್ತರು..!
  Ad Widget   Ad Widget   Ad Widget   Ad Widget   Ad Widget