ಕರಾವಳಿ

ಬೆದ್ರೋಡಿ: ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

803

ನೆಲ್ಯಾಡಿ: ಕಂಟೈನರ್‌ ರಿಪೇರಿ ಮಾಡುತ್ತಿದ್ದವರಿಗೆ ಪಿಕಪ್ ಒಂದು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ಒಬ್ಬ ಗಂಭೀರವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಎಪ್ಪತೈದರ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಡೆದಿದೆ. ಪಿಕಪ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಏನಿದು ಘಟನೆ?

ಬೆದ್ರೋಡಿ ಬಸ್‌ ನಿಲ್ದಾಣದ ಬಳಿ ಲಾರಿಯೊಂದು ಕೆಟ್ಟು ನಿಂತಿತ್ತು. ಇದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ಇದನ್ನು ಸರಿಪಡಿಸಲು ಬೆಂಗಳೂರಿನಿಂದ ಮೆಕ್ಯಾನಿಕ್ ಬಂದು ಕೆಲಸ ನಿರ್ವಹಿಸುತ್ತಿದ್ದರು. ರಸ್ತೆ ಬಳಿ ಕೆಲಸ ನಡೆಸುತ್ತಿದ್ದ ಇವರಿಗೆ ವೇಗವಾಗಿ ಬಂದ ಪಿಕಪ್ ಗುದ್ದಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಸ್‌ ನಾಟೌಟ್ ಗೆ ಸ್ಥಳೀಯರಾದ ಪ್ರಶಾಂತ್ ರೈ ಮಾಹಿತಿ ನೀಡಿದ್ದಾರೆ.

See also  ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್,40 ಮಂದಿಗೆ ಗಾಯ,ಆಸ್ಪತ್ರೆಯಲ್ಲಿ ಚಿಕಿತ್ಸೆ
  Ad Widget   Ad Widget   Ad Widget   Ad Widget   Ad Widget