ನ್ಯೂಸ್ ನಾಟೌಟ್ : ವೈದ್ಯ ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ವಿಚಾರಗಳು ಬಯಲಿಗೆ ಬಂದಿವೆ. ಪೊಲೀಸರ ತನಿಖೆಯಲ್ಲಿ ಇದುವರಗೆ ಉತ್ತರ ಸಿಗದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕೃತಿಕ ದೇಹ ಹೊಕ್ಕಿದ್ದ ಮಾರಕ ಡ್ರಗ್ಸ್ನ ಮೂಲ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಮಹೇಂದ್ರರೆಡ್ಡಿ ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದಿದ್ದು, ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ರಾಶಿ ರಾಶಿ ಔಷಧಗಳು ಪತ್ತೆ ಆಗಿವೆ.
ಮಹೇಂದ್ರರೆಡ್ಡಿ ಪತ್ನಿ ಕೃತಿಕಾ ರೆಡ್ಡಿಯನ್ನ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದ. ಇದೀಗ ಆರೋಪಿಯಿಂದ ಪೊಲೀಸರು ಪ್ರಮುಖ ವಿಚಾರ ಬಾಯ್ಬಿಡಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಸಿಕ್ಕಿದೆ.ಮಾರತ್ ಹಳ್ಳಿ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದಿಂದ ನಿರಂತರ ವಿಚಾರಣೆ ವೇಳೆ ಅನಸ್ತೇಷಿಯಾ ಖರೀದಿ ಮಾಡಿದ್ದು, ಎಲ್ಲಿ ಅಂತಾ ಆರೋಪಿ ಬಾಯ್ಬಿಟ್ಟಿದ್ದಾನೆ. Propofol ಎಂಬ ಅನಸ್ತೇಷಿಯಾವನ್ನ ಕೊಟ್ಟು ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಸ್ವತಃ ತಾನೇ ಡ್ರಗ್ಸ್ ಖರೀದಿ ಮಾಡಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾನೆ.
ನಾನು ಡಾಕ್ಟರ್ propfol ಬೇಕು ಅಂತಾ ಆರೋಪಿ ಮಹೇಂದ್ರ ರೆಡ್ಡಿ ಮೆಡಿಕಲ್ ಸ್ಟೋರ್ನವರ ಬಳಿ ಕೇಳಿದ್ದಾನೆ. ಪ್ರೊಪೋಫೋಲ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಎಂದು ಮೆಡಿಕನ್ನವರು ಹೇಳಿದರೂ,ತಾನೊಬ್ಬ ಸರ್ಜನ್ ಅಂತಾ ತಾನೆ ಬರೆದಿದ್ದ ಪ್ರಿಸ್ಕ್ರಿಪ್ಷನ್ ನೀಡಿ ನನಗೆ ಚಿಕಿತ್ಸೆಗೆ ತುರ್ತಾಗಿ ಬೇಕಿದೆ ಎಂದು ಹೇಳಿ ಖರೀದಿ ಮಾಡಿದ್ದ. ಇತ್ತ ನೋವಿನಿಂದ ಬಳಲಿ ಮನೆಯಲ್ಲಿ ಮಲಗಿದ್ದ ಪತ್ನಿ ಕೃತಿಕಾಳಿಗೆ ರಾತ್ರಿ ವೇಳೆ ತೆರಳಿ ಐವಿ ಮೂಲಕ Propofol ನೀಡಿದ್ದ. ಇದು ಓವರ್ ಡೋಸ್ ಆಗಿ ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ. ಇಂಜೆಕ್ಷನ್ ಪವರ್ಗೆ ಕೃತಿಕಾ ಮೊದಲು ನಿದ್ರೆಗೆ ಜಾರಿದ್ದು ನಂತರ ಕೋಮಾಗೆ ಜಾರಿದ್ದಳು. ಕೋಮಾದಿಂದ ಹೊರ ತರಲು ಮೆಡಿಸನ್ ನೀಡದ ಕಾರಣ ಕೊನೆಗೆ ಪ್ರಾಣಬಿಟ್ಟಿದ್ದಳು. ಈ ವೇಳೆ ರಾತ್ರಿಯೆಲ್ಲಾ ಕೃತಿಕ ಜೊತೆಗೆ ಅದೇ ರೂಮ್ನಲ್ಲಿಯೇ ಆರೋಪಿ ಮಹೇಂದ್ರ ರೆಡ್ಡಿ ಮಲಗಿದ್ದ!
ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದಿದ್ದ ಆರೋಪಿ. ಗ್ಯಾಸ್ಟ್ರಿಕ್ ಔಷಧಿ, ಗ್ಲೂಕೋಸ್ ಬಾಟಲ್ ಸೇರಿದಂತೆ ರಾಶಿ ರಾಶಿ ಔಷಧಗಳು ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ಪತ್ತೆಯಾಗಿವೆ. ಕೃತಿಕಾ ರೂಮನ್ನು ಕ್ಲಿನಿಕ್ ರೀತಿ ಬದಲಾಯಿಸಿದ್ದ. ಋತುಚಕ್ರದ ಸಮಯದಲ್ಲೂ ಡ್ರಿಪ್ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದ. ಕ್ಯಾನುವಲ್ ಚುಚ್ಚಿ ಕೈತುಂಬ ಸೂಜಿಯ ಗಾಯ ಮಾಡಿದ್ದ
ಸದ್ಯ ಆರೋಪಿ ಅನಸ್ತೇಷಿಯಾ ಮೆಡಿಸನ್ ರಹಸ್ಯ ಬೇಧಿಸಿರುವ ಪೊಲೀಸರು, ಆತ ಖರೀದಿ ಮಾಡಿದ್ದಕ್ಕೆ ಸಾಕ್ಷಿ ಪತ್ತೆ ಮಾಡಿದ್ದಾರೆ. ಇದುವರೆಗೆ ತಾನು ಏನು ಮಾಡಿಲ್ಲವೆಂದು ಕಥೆ ಹೇಳಿದರೂ ಆತನೇ ಡ್ರಗ್ಸ್ ಖರೀದಿ ಮಾಡಿರುವುದು ಸಾಕ್ಷಿ ಸಹಿತ ಬಯಲಾಗಿದೆ. ಈ ಕೇಸ್ನಲ್ಲಿ ಸಿಗಬೇಕಿದ್ದ ಒಂದು ದಾಖಲಾತಿ ಅಂದರೆ ಅದು ಡ್ರಗ್ಸ್ ಖರೀದಿ, ಮತ್ತೊಂದು ಜೀವಂತ ಸಾಕ್ಷಿ ಅಂದರೆ ಅದು ಮೆಡಿಕಲ್ ಶಾಪ್ನವರ ಹೇಳಿಕೆ. ಈಗ ಅದೆರಡೂ ಸಿಕ್ಕಿದ್ದು, ತನಿಖೆಗೆ ಹೊಸ ಆಯಾಮ ಸಿಕ್ಕಿದೆ.













