27.7 C
Sullia
Sunday, March 8, 2026

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ : ಜೈಲಿನಲ್ಲಿರುವ ನಟ ದರ್ಶನ್‌ಗೆ ಚೇರ್, ಹೀಟೀಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ

ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಆತನ ಸಹಚರರು ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ತನಗೆ ಬೆನ್ನು ನೋವು ಎಂದು ವೈದ್ಯಕೀಯ ಕಾರಣ ನೀಡಿ ನಟ ದರ್ಶನ್ ಈ ಹಿಂದೆ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದರು. ಆದರೇ, ಈಗ ಮತ್ತೆ ಜೈಲಿನಲ್ಲಿ ಬೆನ್ನು ನೋವು ಕಾಡುತ್ತಿದೆಯಂತೆ.  ಹೀಗಾಗಿ ಜೈಲು ಆಸ್ಪತ್ರೆಯ ವೈದ್ಯರು ಹಾಗೂ ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯ ವೈದ್ಯರು ನಟ ದರ್ಶನ್ ರನ್ನು ತಪಾಸಣೆ ಮಾಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಟ ದರ್ಶನ್‌ ಬೆನ್ನು ನೋವಿಗೆ ಫಿಸಿಯೋ ಥೆರಪಿಗೆ ಸಲಹೆಯನ್ನು ವೈದ್ಯರು ನೀಡಿದ್ದಾರೆ. ಇದರೊಂದಿಗೆ ಹೀಟಿಂಗ್ ಬೆಲ್ಟ್ ನೀಡಲು ವೈದ್ಯರು ಜೈಲು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.  ಬೆನ್ನು ನೋವಿನ ಕಾರಣದಿಂದ ನೆಲದ ಮೇಲೆ ಕೂರದಂತೆ ವೈದ್ಯರು ಸಲಹೆ…ನೀಡಿದ್ದಾರೆ.  ದರ್ಶನ್ ಗೆ ವಾರಕ್ಕೆ 2 ಬಾರಿ ಫಿಸಿಯೋಥೆರಫಿ ನೀಡುವಂತೆ ವೈದ್ಯರ ಸಲಹೆ ನೀಡಿದ್ದಾರೆ.

 ಬಲಗೈಗೆ ಶಸ್ತ್ರಚಿಕಿತ್ಸೆ ಆಗಿದ್ದು, ಹೀಟಿಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ…ನೀಡಿದ್ದಾರೆ.  ಈ ಹಿಂದೆ ಆಪರೇಷನ್ ಮಾಡಿ ಕೈಗೆ ರಾಡ್  ಅನ್ನು ವೈದ್ಯರು ಹಾಕಿದ್ದಾರೆ. 


ಜೈಲಿನಲ್ಲಿರುವ ದರ್ಶನ್ ಓಡಾಡದಂತೆ, ನೆಗೆಯದಂತೆ, ನೆಲದ ಮೇಲೆ ಕೂರದಂತೆ ಸಲಹೆ ನೀಡಲಾಗಿದೆ. ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿರೋ ದರ್ಶನ್ ಗೆ ಒಂದು ಚೇರ್ ನೀಡಲು ಸಹ ಸಲಹೆ ನೀಡಲಾಗಿದೆ. … ಅಕ್ಟೋಬರ್ 10 ರಂದು ಚೇರ್ ಮತ್ತು ಹೀಟಿಂಗ್ ಬೆಲ್ಟ್ ಒದಗಿಸಲು ವೈದ್ಯರು ಸಲಹೆ ನೀಡಿದ್ದರು.  ಸಲಹೆ ನೀಡಿ 9 ದಿನ ಕಳೆದರೂ ದರ್ಶನ್ ಗೆ ಇನ್ನೂ ಚೇರ್ ಮತ್ತು ಹೀಟಿಂಗ್ ಬೆಲ್ಟ್ ನೀಡಿಲ್ಲ. 


ಮತ್ತೊಂದೆಡೆ ನಟ ದರ್ಶನ್‌ಗೆ ಜೈಲಿನಲ್ಲಿ ಒದಗಿಸಿರುವ ಸೌಲಭ್ಯಗಳ ಬಗ್ಗೆ ಬೆಂಗಳೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಡ್ಜ್ ವರದರಾಜ್  ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲು ಮ್ಯಾನ್ಯುಯಲ್ ಪ್ರಕಾರ ನಟ ದರ್ಶನ್‌ಗೆ ಸೌಲಭ್ಯ ನೀಡಲಾಗಿದೆ. ನಟ ದರ್ಶನ್ ಇನ್ನೂ ವಿಚಾರಣಾಧೀನ ಖೈದಿ ಆಗಿರುವುದರಿಂದ ಹೆಚ್ಚಿನ ಸೌಲಭ್ಯ ನೀಡಲು ಜೈಲು ಮ್ಯಾನ್ಯುಯಲ್ ನಲ್ಲಿ ಅವಕಾಶ ಇಲ್ಲ. ಆದರೆ, ಕೆಲವೊಂದು ಸೌಲಭ್ಯ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. 

Related Articles

LEAVE A REPLY

Please enter your comment!
Please enter your name here

Latest Articles