ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ರವಿವಾರ ಎಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಕಾಣಿಸಿಕೊಂಡಿದ್ದಾರೆ.ದಸರಾ ರಜೆ, ಎರಡನೇ ಶನಿವಾರ ಹಾಗೂ ವಾರಾಂತ್ಯ ರಜೆ ಹಿನ್ನಲೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದರು.
ಅಧಿಕ ಭಕ್ತರ ಆಗಮನ ಹಿನ್ನಲೆಯಲ್ಲಿ ಷಣ್ಮುಖ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ, ಪೇಟೆಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು.
ಪೇಟೆಯ ಪಾರ್ಕಿಂಗ್ ಸ್ಥಳಗಳಲ್ಲೂ ವಾಹನಗಳು ತುಂಬಿದ್ದವು. ಇಲ್ಲಿಗೆ ಬಂದ ಭಕ್ತರು ಮಂಗಳೂರಿನ ಮಂಗಳಾದೇವಿ, ಕಟೀಲು, ಪೊಳಲಿ, ಬಪ್ಪನಾಡು,ಮಂದಾರ್ತಿ, ಕೊಲ್ಲೂರು ಸಹಿತ ಕರಾವಳಿಯ ಇತರ ಪ್ರಮುಖ
ದೇಗುಲಗಳಲ್ಲಿ ಕೂಡ ಜನಸಂದಣಿ ಎಂದಿಗಿಂತ ಹೆಚ್ಚು ಕಂಡು ಬಂದಿತ್ತು.













