ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕ ಶಾಲಾ ಸ್ನೇಹಿತರೊಳಗೂಡಿ ಜಾತ್ರೆಗೆ ಬಂದನೆಂದು ಕಿಡಿಗೇಡಿಗಳು ಹಲ್ಲೆ ನಡೆಸಿರುವುದು ವರದಿಯಾಗಿದೆ.
ಮಾ.11ರಂದು ಸಂಜೆ ತನ್ನ ಶಾಲಾ ಸ್ನೇಹಿತರ ಜೊತೆಗೂಡಿ ಜಾತ್ರೆಗೆ ತೆರಳಿದ್ದಾನೆ. ಈ ವೇಳೆ ಜಾತ್ರ ಸ್ಥಳದಲ್ಲಿದ್ದವರು ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಹುಡುಗ ಜಾತ್ರೆಗೆ ಬಂದಿರುವುದನ್ನು ಆಕ್ಷೇಪಿಸಿದ್ದಾರೆ. ಬಾಲಕನ ನಿಂದಿಸಿ ಹಲ್ಲೆ ಕೂಡ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಬಾಲಕನಿಂದ ತಪ್ಪು ಹೇಳಿಕೆಯ ವಿಡಿಯೋವೊಂದನ್ನು ಕೂಡ ಮಾಡಿಸಿಕೊಳ್ಳಲಾಗಿದೆ. ಸದ್ಯದ ಘಟನೆಯಿಂದ ಬಾಲಕ ಆಘಾತಗೊಂಡಿದ್ದಾನೆ ಎಂದು ಬಾಲಕನ ತಂದೆ ಪೊಲೀಸ್ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.







