ನ್ಯೂಸ್ ನಾಟೌಟ್: ನಿಮ್ಮ ಚಿನ್ನದ ಒಡವೆಗಳು ಅಥವಾ ಆಭರಣಗಳ ಬಗ್ಗೆ ತೀವ್ರ ನಿಗಾವಹಿಸುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಉಂಡೆನಾಮ ತಿಕ್ಕುವವರ ಸಂಖ್ಯೆ ಹೆಚ್ಚಾಗಿದೆ. ಬೆಳ್ತಂಗಡಿಯ ವೇಣೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದು ಯಾವುದೋ ದ್ರಾವಣ ಸಿಂಪಡಿಸಿ ಚಿನ್ನವನ್ನು ಕರಗಿಸಿ ಕದ್ದಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದೆ. ಬಿಹಾರ ಮೂಲದ ಚಂದನ್ (30 ವರ್ಷ) ಎನ್ನುವವನನ್ನು ಬಂಧಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಅಕ್ಷಯ್ ಡವಗಿ, ಓಮನ ಎನ್. ನೇತೃತ್ವದಲ್ಲಿ ಎ.ಎಸ್. ಐ. ವೆಂಕಟೇಶ್ ನಾಯ್ಕ, ಎ.,ಎಸ್ ಐ ಬೆನ್ನಿಚ್ಚನ್, ಹೆಚ್.ಸಿ. 405 ಕೃಷ್ಣ, ಮಹೆಚ್.ಸಿ. 913 ಕೇಶವತಿ, ಪಿ.ಸಿ. 2466 ಬಸವರಾಜ್, ಪಿ.ಸಿ. 434 ಮೋಹನ್ , ಪಿ.ಸಿ 604, ರಾಕೇಶ್ ರವರ ತಂಡ ಕಾರ್ಯಾಚರಣೆ ನಡೆಲಾಗಿತ್ತು.













