ನ್ಯೂಸ್ ನಾಟೌಟ್: ಮಹಾಶಿವರಾತ್ರಿ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ ಸುಂದರ ಬಿಸಿಲುಮನೆ ಸ್ಮರಣಾರ್ಥವಾಗಿ ಶ್ರೀ ಗಣೇಶ್ ಯುವ ಬಳಗ ಕೊಯನಾಡು ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಫೆ.15ರಂದು ನಡೆಸಲಾಯಿತು.
ಚಿಟ್ಟೆಕ್ಕಾನದಿಂದ ಕೊಯನಾಡು ವರಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಗಣೇಶ್ ಯುವ ಬಳಗ ಕೊಯನಾಡು ಇದರ ಸದಸ್ಯರು, ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.













