ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಜ.26ರಂದು ಸುಳ್ಯಕ್ಕೆ ಆಗಮಿಸಿದರು. ಈ ವೇಳೆ ಸುಳ್ಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಾಲ್ಲೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ದಂಪತಿಗಳ ಪುತ್ರಿ. ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಅವರನ್ನು ಸುಳ್ಯ ಗೌಡರ ಯುವ ಸೇವಾ ಸಂಘ, ನಗರ ಘಟಕ, ಮಹಿಳಾ ಘಟಕ, ಯುವ ಘಟಕ ಹಾಗೂ ಸುಳ್ಯ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಮತ್ತು ತಂಡ ಸುಳ್ಯ ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಜೇಸಿಐ ಸುಳ್ಯ ಪಯಸ್ವಿನಿ ಸಂಸ್ಥೆ ವತಿಯಿಂದ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಗೌರವಿಸಿದರು. ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ಅಭಿನಂದಿಸಿದರು. ನಗರ ಗೌಡ ಸಂಘದ ಅಧ್ಯಕ್ಷ ರಾಕೇಶ್ ಕುಂಟಿಕಾನ, ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವ ಗೌಡ ಸಂಘದ ಅಧ್ಯಕ್ಷ ಪ್ರೀತಮ್ ಡಿ.ಕೆ. ಎಸ್.ಆರ್.ಸೂರಯ್ಯ ಸೂಂತೋಡು, ಸುಪ್ರೀತ್ ಮೋoಟಡ್ಕ, ಜಯರಾಮ ದೇರಪ್ಪಜ್ಜನಮನೆ, ಎಸ್.ಆರ್.ಹೂವಯ್ಯ ಸೂಂತೋಡು, ಜಯಂತ್ ರೈ ಗೋಂಟಡ್ಕ, ಐ.ಬಿ.ಚಂದ್ರಶೇಖರ್, ತಿಮ್ಮಯ್ಯ ಎಂ.ಎಂ., ರಾಮಕೃಷ್ಣ ರೈ, ಬಲರಾಜ್ ದೇಂಗೋಡಿ, ಶ್ರೀನಿವಾಸ ಮಾಸ್ತರ್ ಹಳೆಗೇಟು, ಜತ್ತಪ್ಪ ರೈ ಸುಳ್ಯ, ಮಲ್ಲಿಕಾರ್ಜುನ ಪ್ರಸಾದ್, ಆನಂದ ಪೂಜಾರಿ ಸುಳ್ಯ, ನಿರಂಜನ್ ಎಂ.ಡಿ., ಬೂಡು ರಮೇಶ್ ಶೆಟ್ಟಿ, ರಾಮಕೃಷ್ಣ ಆಲಂಕಲ್ಯ, ರಿಯಾಜ್ ಕಟ್ಟೆಕಾರ್, ಶೈಲೇಶ್ ಅಂಬೆಕಲ್ಲು, ಲೋಕೇಶ್ ಅಂಬೆಕಲ್ಲು, ಚೈತ್ರಾ ದಿನೇಶ್ ಅಡ್ಕಾರ್, ಜಯಲಕ್ಷ್ಮೀ, ಅಶ್ವಿನಿ ಅಂಬೆಕಲ್ಲು, ಚಿತ್ರಾಲೇಖ ಮಡಪ್ಪಾಡಿ, ಹರ್ಷ ಕರುಣಾಕರ, ಮೀನಾಕ್ಷಿ ರಾಮಕಜೆ, ವೀಣಾ ಹರಿಪ್ರಕಾಶ್ ಉಪಸ್ಥಿತರಿದ್ದರು.













