ನ್ಯೂಸ್ ನಾಟೌಟ್: ಸುಳ್ಯದ ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಜ.26ರಂದು ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಸೈನಿಕ ಹರಿಶ್ಚಂದ್ರ ಬೊಳುಗಲ್ಲು ಸಾಂಕೇತಿಕವಾಗಿ ಧ್ವಜಾರೋಹಣ ನಡೆಸಿದರು. ಶಾಲೆಯ ಶಿಕ್ಷಕರಾದ ಶುಭಕರ ಬಿ.ಸಿ, ಸಂಚಾಲಕಿ ಗೀತಾಂಜಲಿ, ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳನ್ನು ಶಾಲಾ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿರ್ಮಲಾ ಸ್ವಾಗತಿಸಿದರು. ಫಬಿಧ ನಿರೂಪಿಸಿದರು.













