ನ್ಯೂಸ್ ನಾಟೌಟ್: ಸುಳ್ಯದ ನಿಡ್ಯಮಲೆಯ ಯತೀಶ್ ಎನ್ . ಎಂ. ತೀವ್ರ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದೆ. ಅವರಿಗೆ 45 ವರ್ಷ. ಮೂವರು ಹೆಣ್ಮಕ್ಕಳಿದ್ದು ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಪತ್ನಿ, ಮೂವರು ಸಣ್ಣ ಮಕ್ಕಳಿದ್ದು ಮಕ್ಕಳು ಕ್ರಮವಾಗಿ 9 ಹಾಗೂ 6ನೇ ತರಗತಿಯಲ್ಲಿ ಓದುತ್ತಿದೆ. ಇನ್ನೊಂದು ಮಗು 3 ವರ್ಷದ್ದಾಗಿದೆ. ಇವರಿಗೆ ಯಾವುದೇ ಸ್ಥಿತ ಆದಾಯವಿಲ್ಲ. ಅಂದಾಜು ಪ್ರಕಾರ ಚಿಕಿತ್ಸೆಗೆ 15 ಲಕ್ಷ ರೂ. ಬೇಕೆಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬಕ್ಕೆ ಈಗ ಸಹಾಯದ ಹಸ್ತ ಬೇಕಿದೆ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.













