21.6 C
Sullia
Sunday, March 8, 2026

ಕಲ್ಲುಗುಂಡಿ: ವಿಕಲ ಚೇತನ ವ್ಯಕ್ತಿಗೆ ತೀವ್ರ ಥಳಿತ, ರಿಕ್ಷಾದಲ್ಲಿ ಬಂದು ದಾಳಿ, ಮೂವರು ಅಪರಿಚಿತರಿಂದ ಕೃತ್ಯ, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ವಿಕಲಚೇತನ ವ್ಯಕ್ತಿಯ ಮೇಲೆ ಮೂವರು ಅಪರಿಚಿತರು ರಿಕ್ಷಾದಲ್ಲಿ ಬಂದು ದಾಳಿ ನಡೆಸಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಿಂದ ವರದಿಯಾಗಿದೆ. ದಾಳಿಗೊಳಗಾದವರನ್ನು ಕಡೆಪಾಲದ ಬೋಜ (43 ವರ್ಷ) ಎಂದು ಗುರುತಿಸಲಾಗಿದೆ. ಬೋಜ ಅವರು ಕಡೆಪಾಲ ತಿರುವಿನ ಬಳಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾಗ ಈ ದುರ್ಘಟನೆ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಬೋಜ ಅವರು ಸಂಪಾಜೆ ಗ್ರಾಮ ಪಂಚಾಯತ್ ನಡಿಯಲ್ಲಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಮಾಡುತ್ತಿದ್ದರು. ದಾಳಿ ಮಾಡಿದ ಮೂವರು ಅಪರಿಚಿತರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ರಿಕ್ಷಾ ಸಹಿತ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಬೋಜ ಅವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles