ನ್ಯೂಸ್ ನಾಟೌಟ್ : ಪೆರಾಜೆ ಸಮೀಪದ ನಿಡ್ಯಮಲೆ ರಸ್ತೆ ಬದಿಯ ಪಾನತ್ತಿಲ ಎಂಬಲ್ಲಿ ಕಡೆವೆಯ ಮೃತದೇಹ ಪತ್ತೆಯಾಗಿತ್ತು.ಈ ಕೃತ್ಯದಲ್ಲಿ ಸ್ಥಳೀಯರು ಭಾಗಿಯಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.ಇದೀಗ ಸ್ಥಳೀಯರೇ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ನ. 27ರಂದು ರಾತ್ರಿ ಯಾರೋ ಬೇಟೆಗಾರರು ಗುಂಡು ಹೊಡೆದ ಕಾರಣ ಕಡವೆ ರಸ್ತೆ ಬದಿ ಬಂದು ಬಿದ್ದಿವೆ ಎಂಬ ಸಂಶಯ ವ್ಯಕ್ತವಾಗಿತ್ತು.ಈ ಘಟನೆ ನ.28ರಂದು ಬೆಳಕಿಗೆ ಬಂದಿತ್ತು. ಸಂಪಾಜೆ ಅರಣ್ಯ ಇಲಾಖೆಯವರು ಸತ್ತ ಕಡೆವೆಯನ್ನು ಕೊಂಡೊಯ್ದು ಹಲವರನ್ನು ವಿಚಾರಣೆಗೊಳಪಡಿಸಿದ್ದರು.ಸ್ಥಳೀಯರು ಕಡವೆ ರಸ್ತೆ ಬದಿ ಬಿದ್ದುಕೊಂಡಿರುವ ವಿಷಯವನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದರು.ಇದೀಗ ಕೆಲವರ ಬಂದೂಕುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.













