ನ್ಯೂಸ್ ನಾಟೌಟ್ : ಕೆ.ವಿ. ಜಿ. ಕಾನೂನು ಕಾಲೇಜಿನಲ್ಲಿ ನ. 21ರಂದು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಸಾಮಾಜಿಕ ಭದ್ರತೆ ಎಂಬ ವಿಷಯದ ಕುರಿತು ಎಸ್. ಡಿ. ಎಮ್ ಕಾನೂನು ಕಾಲೇಜಿನ ಉಪನ್ಯಾಸಕ ಮತ್ತು ಕಾನೂನು ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಪ್ರಭು ಅವರು ಉಪನ್ಯಾಸ ನೀಡಿದರು. ಈ ಸಂದರ್ಭ ಕೆ. ವಿ.ಜಿ. ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಸಂಯೋಜಕಿ ರಚನಾ. ಕೆ ಮತ್ತು ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಯಂತಿ ಡಿಯಾಸ್ ನಿರೂಪಿಸಿ, ವಂದಿಸಿದರು.













