ನ್ಯೂಸ್ ನಾಟೌಟ್: ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿರುವ ಪುರಾತನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜಾನುವಾರು ಜಾತ್ರೆಯ ಸಾಂಕೇತಿಕ ಆಚರಣೆಯನ್ನು ನಡೆಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಅಲ್ಲಿನ ಅಧಿಕಾರಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನ ಅರ್ಚಕರಾದ ಗಣೇಶ್ ದೀಕ್ಷಿತ್, ಶಿವರಾಂ ರೈ ಹಾಗೂ ಎಲ್ಲ ಸದಸ್ಯರು ಭಾಗವಹಿಸಿದರು. 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನವು ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ತಾರಕಾಸುರನನ್ನು ನಂದಿ ವಿದ್ಯೆಯ ಮೂಲಕ ಸಂಹಾರ ನಡೆಸಿದ ನಂದಿ ಇಲ್ಲಿ ಸಾಕ್ಷಾತ್ ಮಹಾದೇವನ ರೂಪದಲ್ಲಿ ನೆಲೆಸಿದ್ದಾರೆ. ಇಲ್ಲಿ ದೀಪ ಹಚ್ಚಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತದೆ ಅನ್ನುವ ನಂಬಿಕೆ ಭಕ್ತರದ್ದಾಗಿದೆ.













