ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ರೈತಪರ ನಿಲುವು ಹೊಂದಿರುವ ದ.ಕ. ಜೇನು ಸೊಸೈಟಿಯ ಸಂಸ್ಕರಣ ಘಟಕಕ್ಕೆ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಇದರ ಚೀಫ್ ಮೆಂಟರ್ ಜಯರಾಮ್ ರೈಪುರ್ ಹಾಗೂ ಮೆಂಬರ್ ಶಿಪ್ ಕೋ ಆರ್ಡಿನೇಟರ್ ಸಾಮ್ರಾಟ್ ಗೌಡ ಅವರು ಭೇಟಿ ನೀಡಿದರು. ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೇನು ಸೊಸೈಟಿ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಸನ್ಮಾನಿಸಿದರು. ಪದ್ಮ ಕೋಲ್ಚಾರ್, ಸುಪ್ರೀತ್ ಮೊಂಟಡ್ಕ , ಜೇನು ಸೊಸೈಟಿ ಸಿಬ್ಬಂದಿ ಹಾಜರಿದ್ದರು.













