Latest

13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ!ಟೀಚರ್ ಈಗ 5 ತಿಂಗಳ ಗರ್ಭಿಣಿ!!

1.4k

ನ್ಯೂಸ್‌ ನಾಟೌಟ್: ಶಿಕ್ಷಕರೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವವರು.ಆ ಸ್ಥಾನಕ್ಕೆ ಅಷ್ಟೇ ಗೌರವ ಹಾಗೂ ಜವಾಬ್ದಾರಿಯೂ ಇದೆ.ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಶಿಕ್ಷಕರ ಪಾತ್ರವೂ ಇದೆ. ಆದರೆ ಈ ಒಂದು ಘಟನೆ ಆಘಾತಕಾರಿ ಎಂಬಂತಿದೆ.ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯೂ ಮೂಡಿದೆ. ಹದಿಮೂರು ವರ್ಷದ ತನ್ನ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೋರ್ವಳು ಓಡಿಹೋಗಿದ್ದು, ಇದೀಗ ಗರ್ಭಿಣಿ ಅನ್ನುವ ವಿಚಾರಕ್ಕೆ ತೀವ್ರ ಕಳವಳ ವ್ಯಕ್ತವಾಗಿದೆ.

ಏನಿದು ಘಟನೆ?

ಈ ಪ್ರಕರಣ ಗುಜರಾತ್ ನಲ್ಲಿ ನಡೆದಿದೆ ಎನ್ನಲಾಗಿದ್ದು, ಸೂರತ್‌ನ 23 ವರ್ಷದ ಖಾಸಗಿ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಬಳಿಕ ಐದು ತಿಂಗಳ ಗರ್ಭಿಣಿಯಾಗಿ ಪತ್ತೆಯಾಗಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಎಪ್ರಿಲ್ 25 ರ ಮಧ್ಯಾಹ್ನ,ಬಾಲಕನೊಂದಿಗೆ ಅತ್ಯಂತ ಸಲುಗೆಯಿಂದಿದ್ದ ಶಿಕ್ಷಕಿ, ಹಾಡ ಹಗಲೇ ನಾಪತ್ತೆಯಾಗಿದ್ದಳು. ಆ ಬಳಿಕ ಇಬ್ಬರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಶಿಕ್ಷಕಿಯು ಬಾಲಕನೊಂದಿಗೆ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಮೂರು ವರ್ಷಗಳಿಂದ ಈ ಶಿಕ್ಷಕಿ ಹುಡುಗನಿಗೆ ಪಾಠ ಮಾಡುತ್ತಿದ್ದು, ಕಳೆದೊಂದು ವರ್ಷದಿಂದ ಅವನು ಅವಳ ಏಕೈಕ ಖಾಸಗಿ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.ಬಳಿಕ ಇಬ್ಬರಲ್ಲೂ ಸಲುಗೆ ಬೆಳೆದಿದೆ.ಪೊಲೀಸ್ ತನಿಖೆಯಲ್ಲಿ, ಶಿಕ್ಷಕಿಯ ಮನೆಯಲ್ಲಿ ಮತ್ತು ನಂತರ ವಡೋದರಾದ ಹೋಟೆಲ್‌ನಲ್ಲಿ ಲೈಂ*ಗಿಕ ಸಂಪರ್ಕ ನಡೆದಿದೆ ಎಂದು ತಿಳಿದುಬಂದಿದೆ.

ಬಾಲಕನ ಪೋಷಕರು ದೂರು ದಾಖಲಿಸಿದ ನಾಲ್ಕು ದಿನಗಳ ಹುಡುಕಾಟದ ನಂತರ ಗುಜರಾತ್-ರಾಜಸ್ಥಾನ ಗಡಿಯ ಬಳಿ ಇಬ್ಬರು ಪತ್ತೆಯಾಗಿದ್ದಾರೆ. ವಡೋದರಾ, ಅಹಮದಾಬಾದ್, ದೆಹಲಿ, ಜೈಪುರ ಮತ್ತು ವೃಂದಾವನ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದ್ದು, ಇದೀಗ ಶಿಕ್ಷಕಿಯನ್ನು ಬಂಧಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಮಾನ್ಸಿ ಎಂಬ ಶಿಕ್ಷಕಿ ಗರ್ಭಧರಿಸಿರುವುದು ಬಹಿರಂಗವಾದ ನಂತರ, ಅಪ್ರಾಪ್ತ ವಯಸ್ಕನೇ ತಂದೆ ಎಂದು ಆಕೆ ಹೇಳಿಕೊಂಡಿದ್ದಾಳೆ.ಅಧಿಕಾರಿಗಳು ತತ್ ಕ್ಷಣ ಡಿಎನ್ಎ ಪರೀಕ್ಷೆಗೆ ಆದೇಶಿಸಿದ್ದಾರೆ.ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಔಪಚಾರಿಕ ಪ್ರಕರಣ ದಾಖಲಾಗಿದೆ.ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಲೈಂ*ಗಿಕ ಶೋಷಣೆಗಾಗಿ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.ಹಿರಿಯ ಅಧಿಕಾರಿಗಳು ಈ ಘಟನೆ ‘ನಂಬಿಕೆ ಮತ್ತು ಅಧಿಕಾರದ ಗಂಭೀರ ಉಲ್ಲಂಘನೆ’ ಎಂದು ಕರೆದಿದ್ದಾರೆ.ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಕ್ಷೇತ್ರಗಳಲ್ಲಿ ರಕ್ಷಣೆಯ ತುರ್ತು ಅಗತ್ಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ನ್ಯಾಯಾಲಯದ ಆದೇಶದ ಡಿಎನ್‌ಎ ಪರೀಕ್ಷೆಯ ಫಲಿತಾಂಶಕ್ಕೆ ಕಾಯಲಾಗುತ್ತಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣದ ತೀವ್ರ ತನಿಖೆಯೂ ನಡೆಯುತ್ತಿದೆ.

 

See also  ಸ್ಕೂಟರ್ ನಲ್ಲಿ 100 ಕೆ.ಜಿ.ಗೂ ಅಧಿಕ ದನದ ಮಾಂಸ ಸಾಗಾಟ, ಕಾರ್ಯಾಚರಣೆ ನಡೆಸಿದಾಗ ಸ್ಕೂಟರ್ ಬಿಟ್ಟು ಪರಾರಿಯಾದ ಸವಾರ..!
  Ad Widget   Ad Widget   Ad Widget   Ad Widget