21.6 C
Sullia
Sunday, March 8, 2026

ಅರ್ಧಕ್ಕೆ ನಿಂತ ಗ್ರಾಮದ ದೇಗುಲ ನಿರ್ಮಾಣ ಕಾರ್ಯ, 850 ಮಹಿಳೆಯರು ಸೇರಿ ಮಾಡಿದ್ದೇನು ಗೊತ್ತಾ?

ನ್ಯೂಸ್ ನಾಟೌಟ್ :ಮಹಿಳೆಯರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಲ್ಲರು ಅನ್ನೋದಕ್ಕೆ ಈ ಒಂದು ಘಟನೆಯೇ ಸಾಕ್ಷಿಯೆಂಬಂತಿದೆ.ತಮ್ಮ ಊರಿನಲ್ಲಿ ಅರ್ಧಕ್ಕೆ ನಿಂತ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ 850 ಮಹಿಳೆಯರು ತಮಗೆ ಸರ್ಕಾರ ನೀಡಿದ್ದ ಗೃಹಲಕ್ಷ್ಮಿ ಹಣವನ್ನು ಸಮರ್ಪಿಸಿರುವ ಪ್ರಸಂಗ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ತಿಮ್ಮಾಪೂರದಲ್ಲಿ ಕಳೆದ 4 ವರ್ಷದಿಂದ ಯಲ್ಲಮ್ಮ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಗ್ರಾಮಸ್ಥರು ₹50 ಲಕ್ಷ ವೆಚ್ಚ ಮಾಡಿದ್ದಾರೆ. ಹಣದ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಮಂದಿರ ಪೂರ್ಣಗೊಳ್ಳಲು ಲಕ್ಷಾಂತರ ಅಗತ್ಯವಿದ್ದು, ಗ್ರಾಮದ 850 ಮಹಿಳೆಯರು ತಮ್ಮ ಖಾತೆಗೆ ಜಮೆಯಾಗುವ ಗೃಹಲಕ್ಷ್ಮಿ ಹಣವನ್ನು ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. 

850 ಗೃಹಲಕ್ಷ್ಮಿ ಫಲಾನುಭವಿಗಳು ತಮಗೆ ಬರುವ ಹಣವನ್ನು ಸಂಗ್ರಹಿಸಿ ಈಗಾಗಲೇ ₹2.50 ಲಕ್ಷ ದೇಣಿಗೆ ನೀಡಿದ್ದು, ಒಟ್ಟು ₹16 ಲಕ್ಷ ನೀಡಲಿದ್ದಾರೆ. ಈ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಂಸತ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles