ನ್ಯೂಸ್ ನಾಟೌಟ್: ಅರಂತೋಡು ನಯಾರ ಪೆಟ್ರೋಲ್ ಬಂಕ್ ನಲ್ಲಿ ಎರಡು ದಿನಗಳ ಹಿಂದೆ ಕೇರಳ ರಿಜಿಸ್ಟ್ರೇಶನ್ ಹೊಂದಿದ ಕಾರಿನ ಚಾಲಕನೊಬ್ಬ ಪೆಟ್ರೋಲ್ ಹಾಕಿಸಿಕೊಂಡು ಬಿಲ್ ಪಾವತಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದ.
ಈ ಘಟನೆಗೆ ಸಂಬಂಧಪಟ್ಟಂತೆ ದೂರು ಕೂಡ ದಾಖಲಾಗಿತ್ತು. ಮಗ ಅರಂತೋಡಿನಿಂದ ಪರಾರಿಯಾಗಿದ್ದ, ಜಾಲ್ಸೂರು ಬಳಿ ಕಾರು ತಡೆದು ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇದೀಗ ಮಗನ ಅವಾಂತರದಿಂದ ಅಮ್ಮ ತಲೆತಗ್ಗಿಸುವಂತಾಗಿದೆ. ಕಾರಿನ ನಂಬರ್ ಪರಿಶೀಲಿಸಿ ಈ ಆಧಾರದಲ್ಲಿ ಕಾರಿನ ಮಾಲೀಕರಿಗೆ ಕರೆ ಮಾಡಿದಾಗ ಯುವಕನ ತಾಯಿ ಫೋನ್ ತೆಗೆದಿದ್ದಾರೆ. ವಿಷಯ ತಿಳಿದ ಬಳಿಕ ದೂರು ದಾಖಲಿಸಬೇಡಿ ಆ ಬಿಲ್ ನಾನು ಪಾವತಿಸುತ್ತೇನೆಂದು ತಿಳಿಸಿ 1 ಸಾವಿರ ರೂ. ವನ್ನು ಬಂಕ್ ಗೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪ್ರಕರಣವು ಸುಖಾಂತ್ಯ ಕಂಡಿದೆ.













